ಬಂಟ್ವಾಳ: ನೋಟ್ಪುಸ್ತಕದಲ್ಲಿ ತಪ್ಪಾಗಿ ಬರೆದಿರುವುದಕ್ಕಾಗಿ ಮೊಗರ್ನಾಡು ಶಾಲೆಯ ಶಿಕ್ಷಕನೋರ್ವ ವಿದ್ಯಾರ್ಥಿಯೋರ್ವನಿಗೆ ಥಳಿಸಿರುವ ಆರೋಪದಡಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೋಟ್ಪುಸ್ತಕಲ್ಲಿ ತಪ್ಪಾಗಿ ಬರೆದಿದ್ದಕ್ಕೆ ಮೊಗರ್ನಾಡು ಶಾಲೆಯ ಸಮಾಜ ಅಧ್ಯಯನದ ಶಿಕ್ಷಕ ಅಬ್ದುಲ್ ಖಾದರ್ ಎಂಬವರು ತನ್ನ ತಲೆ, ಕುತ್ತಿಗೆಗೆ ಕೈಯಿಂದ ಹೊಡೆದಿದ್ದಾರೆ. ಇದರಿಂದ ತನ್ನ ಕುತ್ತಿಗೆ ನೋವಾಗಿದ್ದು, ಬಂಟ್ವಾಳ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ ಎಂದು ವಿದ್ಯಾರ್ಥಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾನೆ.
ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.