ಬಂಟ್ವಾಳ: ಮಾ.3 ರಂದು ಆದಿತ್ಯ ವಾರ ಸಂಜೆ 4:30 ಕ್ಕೆ ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪುದು ಮಹಾ ಶಕ್ತಿ ಕೇಂದ್ರದ ಚುನಾವಣಾ ಕಾರ್ಯಾಲಯ ಉದ್ಘಾಟನೆ , ಮೋದಿಗಾಗಿ ವಿಜಯ ಸಂಕಲ್ಪ ಯಾತ್ರೆ , ವಾಹನ ಜಾಥಾ, ಸಾರ್ವಜನಿಕ ಸಮಾವೇಶ, ಹಿರಿಯ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ಗಳು ನಡೆಯಲಿದ್ದು ಆ ಪ್ರಯುಕ್ತ ಮಾ.1 ರಂದು ಶುಕ್ರವಾರ ಬೆಳಿಗ್ಗೆ ಗಂಟೆ 10:00 ಕ್ಕೆ ಫರಂಗಿಪೇಟೆ ಪುಂಚಮೆ ಯಲ್ಲಿರುವ ನಿಯೋಜಿತ ಕಾರ್ಯಾಲಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದಿನೇಶ್ ಶೆಟ್ಟಿ ಕೊಟ್ಟಿಂಜ ಪ್ರದಾನ ಕಾರ್ಯದರ್ಶಿ ಭಾ ಜ ಪ ಮಹಾ ಶಕ್ತಿ ಕೇಂದ್ರ ಇವರು ತಿಳಿಸಿದ್ದಾರೆ.
