ಬಂಟ್ವಾಳ: ಹೆದ್ದಾರಿಯ ಕಾಮಗಾರಿ ಸಂದರ್ಭ ಬಂಟ್ವಾಳ ಪುರಸಭ ನೀರು ಪೂರೈಕೆಯ ಪೈಪು ಒಡೆದು ಸ್ಥಳೀಯ ಮನೆಯ ಅಂಗಳಕ್ಕೆ ನೀರು ನುಗ್ಗಿದ ಘಟನೆ ನಡೆದಿದೆ.
ಕಾಮಗಾರಿ ಹೆದ್ದಾರಿಯ ಸುತ್ತಮುತ್ತಲಲ್ಲಿ ಅಗೆದು ಹಾಕಲಾಗಿದ್ದು, ಹೀಗಾಗಿ ಮಣ್ಣು ಕುಸಿದಿದೆ.
ಕಾಮಗಾರಿ ನಡೆಸುವವರ ಬೇಜಾವಬ್ದಾರಿಯಿಂದ ಈ ಸಮಸ್ಯೆಗಳು ಉಂಟಾಗುತ್ತಿವೆ ಎಂಬುದು ಸ್ಥಳೀಯ ಮನೆಯವರ ಆರೋಪ.


ಮಳೆಗಾಲ ಆರಂಭವಾಗುತ್ತಿರುವುದರಿಂದ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಇರುವುದರಿಂದ ಇಲ್ಲಿನ ನಿವಾಸಿಗಳ ಮನೆಯೊಳಗೆ ನೀರು ಬರುವ ಎಲ್ಲಾ ಲಕ್ಷಣಗಳು ಇವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

