ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ಮಾಹಿತಿ ಕಾರ್ಯಗಾರ ಮಾ.17 ರಂದು ಬೆಳಿಗ್ಗೆ ಬಿ.ಜೆಪಿ ಕಛೇರಿಯಲ್ಲಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಬಜೆಟ್ ಮಾಹಿತಿಯನ್ನು ದಿನೇಶ್ ಪೈ ಅವರು ಅಂಕಿ ಅಂಶಗಳ ಮುಖಾಂತರ ವಿವರವಾಗಿ ನೀಡಿದರು. ಕೇಂದ್ರ ಹಾಗೂ ರಾಜ್ಯದ ಬಜೆಟ್ ಉತ್ತಮವಾಗಿದ್ದು, ಜನಸಾಮಾನ್ಯರಿಗೆ ಇದನ್ನು ತಿಳಿಸುವ ಮುಖಾಂತರ ಸರ್ಕಾರದ ಸವಲತ್ತುಗಳು ಜನರಿಗೆ ಪೂರಕವಾಗಿ ಸಿಗುವಂತೆ ಪಕ್ಷದ ಕಾರ್ಯಕರ್ತರು ಕೆಲಸ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಸದಸ್ಯರಾದ ರವೀಂದ್ರ ಕಂಬಳಿ ಮತ್ತು ಕಮಲಾಕ್ಷಿ ಪೂಜಾರಿ, ಕ್ಷೇತ್ರದ ಪದಾಧಿಕಾರಿಗಳು, ತಾಲೂಕು ಪಂಚಾಯತ್ ಸದಸ್ಯರು, ಪುರಸಭಾ ಸದಸ್ಯರು, ಕ್ಷೇತ್ರ ಮೋರ್ಚಾಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಮಾಜದ ವಿವಿದ ಕ್ಷೇತ್ರದ ಪ್ರಮುಖರು, ವೇದಿಕೆಯಲ್ಲಿ ಸುಲೋಚನ ಜಿ.ಕೆ ಭಟ್, ಜಿಲ್ಲಾ ಪ್ರ.ಕಾರ್ಯದರ್ಶಿ ರಾಮ್ದಾಸ್ ಬಂಟ್ವಾಳ ಉಪಸ್ಥಿತರಿದ್ದರು. ಕ್ಷೇತ್ರ ಪ್ರ.ಕಾರ್ಯದರ್ಶಿ ಡೊಂಬಯ್ಯ ಅರಳ ಸ್ವಾಗತಿಸಿ, ರವೀಶ್ ಶೆಟ್ಟಿ ವಂದಿಸಿದರು.

