ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ಬಳಿಯಲ್ಲಿ ಲಾರಿಯೊಂದು ರೈಲ್ವೆ ಮೇಲ್ಸೆತುವೆಯ ಮೀಟರ್ ಗೇಜ್ ತಾಗಿ ಸ್ಥಳದಲ್ಲಿ ಲಾರಿ ಬಾಕಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಬಿ.ಸಿ.ರೋಡಿನಿಂದ ಕೈಕಂಬ ಮೂಲಕ ಬಳ್ಳಾರಿಯಿಂದ ಮಲ್ಲೂರು ಕಡೆಗೆ ಕುರಿ ಗೊಬ್ಬರ ಹೇರಿಕೊಂಡು ಹೋಗುವ ವೇಳೆಗೆ ಕೈಕಂಬ ದಲ್ಲಿರುವ ರೈಲ್ವೆ ಮೇಲ್ಸೆತುವೆಯ ಸನಿಹದಲ್ಲಿ ಘನ ಗಾತ್ರದ ವಾಹನಗಳು ಈ ಮೂಲಕ ಸಾಗಿಸಲು ಅವಕಾಶ ಇಲ್ಲದಂತೆ ಹಾಕಲಾದ ಮೀಟರ್ ಗೇಜ್ ಕಂಬಗಳನ್ನು ಲಾರಿಯೊಂದು ಬುಡಸಮೇತ ಕಿತ್ತು ಜಾಮ್ ಅಗಿ ರಸ್ತೆಯ ಮದ್ಯದಲ್ಲೆ ಬಾಕಿಯಾಯಿತು.


ಲಾರಿಯ ಲೋಡ್ ಗಾತ್ರದ ಬಗ್ಗೆ ಲಾರಿ ಚಾಲಕನಿಗೆ ಸರಿಯಾಗಿ ತಿಳಿಯದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗುತ್ತದೆ.
ಈ ಹಿಂದೆ ಅನೇಕ ಬಾರಿ ಇಂತಹ ಘಟನೆಗಳು ಈ ಸ್ಥಳದಲ್ಲಿ ನಡೆದಿದೆ. ಮತ್ತೆ ಮತ್ತೆ ಘಟನೆಗಳು ಪುನರಾವರ್ತನೆ ಅಗುತ್ತಲೆ ಇದ್ದರೂ ರೈಲ್ವೆ ಇಲಾಖೆಯ ವರು ಸಮಸ್ಯೆ ಸರಿ ಮಾಡಲು ಮುಂದಾಗುತ್ತಿಲ್ಲ ಎಂದು ಸ್ಥಳೀಯ ರು ಹೇಳುತ್ತಿದ್ದಾರೆ.
ಸಾರ್ವಜನಿಕ ರಿಗೆ ಇದರಿಂದ ಪದೆ ಪದೇ ತೊಂದರೆ ಯಾಗುತ್ತಿದ್ದು ಪ್ರಾಣ ಅಪಾಯ ಅಗುವ ಮೊದಲು ಇಲಾಖೆ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಲು ಸಾರ್ವಜನಿಕ ರು ಮನವಿ ಮಾಡುತ್ತಿದ್ದಾರೆ. ಸ್ಥಳದಲ್ಲಿ ಟ್ರಾಫಿಕ್ ಪೋಲೀಸರು ಟ್ರಾಫಿಕ್ ಜಾಮ್ ಸಮಸ್ಯೆಯಾಗದಂತೆ ಕ್ರಮ ಕೈಗೊಂಡಿದ್ದಾರೆ.