ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಇದರ ನೂತನ ಅಧ್ಯಕ್ಷರಾಗಿ ಪದ್ಮನಾಭ ಬಿ. ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಭವಾನಿಶಂಕರ್ ರಾವ್ ಕೇದಗೆ, ಸದಸ್ಯರಾಗಿ ಎಂ.ಮಹಾಬಲ ಶೆಟ್ಟಿ, ಕೆ.ಎನ್. ಶೇಖರ್, ಎಂ.ಕರುಣೇಂದ್ರ, ಮನೋಹರ, ಪ್ರಕಾಶ್, ಸದಾಶಿವ ಶೆಣ್ಯೆ, ರಾಮಚಂದ್ರ ಗೌಡ, ವಿಠಲ ಪುಂಡಿಬೈಲು, ಹರೀಶ್ ನಾಯ್ಕ್, ಲಕ್ಮೀ ವಿ.ಪ್ರಭು, ಪದ್ಮಾವತಿ ಅವರು ಆಯ್ಕೆಯಾಗಿದ್ದಾರೆ.

ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ 2020-25ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ಸಹಕಾರಿ ಭಾರತಿ ಬೆಂಬಲಿತ 13 ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಈ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಳೆದ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಜಿ.ಆನಂದ ಅವರು ಅಸೌಖ್ಯದಿಂದ ಮರಣ ಹೊಂದಿದ್ದರು.