Tuesday, February 11, 2025

ಕುಂಭಮೇಳದ ಯಶಸ್ವಿನ ಹಿಂದೆ ಇದ್ದಾರೆ ಬಂಟ್ವಾಳ ಮೂಲದ ಐ.ಎ.ಎಸ್.ಆಫೀಸರ್

ಬಂಟ್ವಾಳ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುವ ಕುಂಭಮೇಳದ ಯಶಸ್ವಿನ ಹಿಂದೆ ಇದ್ದಾರೆ ಬಂಟ್ವಾಳ ಮೂಲದ ಐ.ಎ.ಎಸ್.ಅಫೀಸರ್ .

ಉತ್ತರ ಪ್ರದೇಶದ ಯೋಗಿ ನೇತ್ರತ್ವದ ಬಿಜೆಪಿ ಸರಕಾರದ ನೇತ್ರತ್ವದಲ್ಲಿ ಪ್ರಯಾಗ್ ರಾಜ್ ನಲ್ಲಿ ದೇಶ ವಿದೇಶಗಳ ಗಮನ ಸೆಳೆಯುವಂತೆ ನಡೆಯುವ ಕುಂಭಮೇಳದ ಯಶಸ್ಸಿನ ಮೂಲ ಕಾರಣೀಕರ್ತ ಬಂಟ್ವಾಳ ತಾಲೂಕಿನ ಲೋರೆಟ್ಟೋದವರಾದ ಐ.ಎ.ಎಸ್.ಅಧಿಕಾರಿ ವಿಜಯಕಿರಣ್ ಆನಂದ್.
ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕುಂಭಮೇಳ ಆಯೋಜನೆಯ ಸಂಪೂರ್ಣ ಜವಾಬ್ದಾರಿ ಯನ್ನು ಒಂದು ವರ್ಷದ ಹಿಂದೆಯೇ ಯೋಗಿ ಸರಕಾರ ಇವರ ಹೆಗಲಿಗೆ ನೀಡಿತ್ತು.

ಉತ್ತರಪ್ರದೇಶ ದ ವಾರಾಣಸಿ ಸಹಿತ ಅನೇಕ ಕಡೆಗಳಲ್ಲಿ ಜಿಲ್ಲಾಧಿಕಾರಿ ಯಾಗಿ ದಕ್ಷ ಪ್ರಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸಾರ್ವಜನಿಕ ರ ಗಮನ ಸೆಳೆದಿದ್ದರು.
ಇವರ ಪ್ರಮಾಣಿಕ ಸೇವೆ ಯನ್ನು ಗುರುತಿಸಿದ ಯೋಗಿ ಸರಕಾರ ಕುಂಭಮೇಳ ಮೇಳದ ಮೂಲಭೂತ ಸೌಕರ್ಯಗಳ ಹಾಗೂ ವ್ಯವಸ್ಥಿತ ರೀತಿಯಲ್ಲಿ ನಡೆಸಲು ಉಸ್ತುವಾರಿ ಯನ್ನು ವಿಜಯಕಿರಣ್ ಆನಂದ ಅವರಿಗೆ ಕಳೆದ ವರ್ಷವೇ ನೀಡಿತ್ತು.‌
ಸರಕಾರ ನೀಡಿದ ಜವಬ್ದಾರಿ ಗೆ ಕಿಂಚಿತ್ತೂ ತೊಂದರೆ ಯಾಗದ ರೀತಿಯ ಲ್ಲಿ ವ್ಯವಸ್ಥೆ ಗಳನ್ನು ಕಲ್ಪಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಮೂಲಕ ಸಹಬ್ಬಾಸ್ ಗಿರಿ ಪಡೆದಿದ್ದಾರೆ.
ಇವರು ಬಂಟ್ವಾಳ ದ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬಳಿಕ ಉನ್ನತ ಶಿಕ್ಷಣ ಕ್ಕೆ ಬೆಂಗಳೂರು ತೆರಳಿದ್ದರು.
ಬಂಟ್ವಾಳ ದ ಉದ್ಯಮಿ ಹಾಗೂ ಬಿಜೆಪಿ ಪ್ರಮುಖ ಉದಯಕುಮಾರ್ ರಾವ್ ಅವರ ಧರ್ಮ ಪತ್ನಿ ವಿದ್ಯಾರಾವ್ ಅವರ ಸಹೋದರ.

More from the blog

ಕಾರು ಡಿಕ್ಕಿ ಬೈಕ್ ಸವಾರ ಗಂಭೀರ

ಬಂಟ್ವಾಳ: ಮಣಿಹಳ್ಳ-ಮಾವಿನಕಟ್ಟೆ ರಸ್ತೆಯ ಮಣಿನಾಲ್ಕೂರು ಗ್ರಾಮದ ಎರ್ಮಳದಲ್ಲಿ ಸ್ಕೂಟರೊಂದಕ್ಕೆ ಎದುರಿನಿಂದ ಆಗಮಿಸಿದ ಕಾರೊಂದು ಢಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಫೆ. ೯ರಂದು ನಡೆದಿದೆ. ಸರಪಾಡಿ ಕಲ್ಕೊಟ್ಟೆ ನಿವಾಸಿ ಸುಂದರ ಬಾಬು ಶೆಟ್ಟಿ ಗಾಯಗೊಂಡವರು....

ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ನಲ್ಲೂ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಇದೇ ಮೊದಲ ಬಾರಿಗೆ...

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಬಂಟ್ವಾಳ : ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ‌ ಭಾನುವಾರ‌ ಚುನಾವಣೆ ನಡೆದಿದ್ದು, ಸಹಕಾರ ಭಾರತಿಯ 17 ಮಂದಿ‌ ಅಭ್ಯರ್ಥಿಗಳು...

ಕೊಳ್ನಾಡು : ಬಾರೆಬೆಟ್ಟು ಮಂಟಮೆಯಲ್ಲಿ ಕಾಲಾವಧಿ ಜಾತ್ರೆ

ವಿಟ್ಲ : ಕೊಳ್ನಾಡು ಗ್ರಾಮದ ಕಾರಣಿಕದ ಪ್ರಸಿದ್ಧ ದೈವಕ್ಷೇತ್ರ 'ಬಾರೆಬೆಟ್ಟು ಮಂಟಮೆ'ಯ ಕಾಲಾವಧಿ ಜಾತ್ರೆಯು ವಿಜೃಂಭಣೆಯಿಂದ ಜರಗಿತು. ಶ್ರೀ ಮಲರಾಯಿ ಮತ್ತು ಬಂಟ ದೈವದ ದೈವದ ಕೊಟ್ಯದಾಯನ ನೇಮೋತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಮಲರಾಯಿ...