ಬಂಟ್ವಾಳ: ಸಂಚಾರ ಪೋಲೀಸ್ ಠಾಣೆ ಮೆಲ್ಕಾರ್ ಇದರ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ 2019 ಕಾರ್ಯಕ್ರಮಕ್ಕೆ ಮೆಲ್ಕಾರ್ ನಲ್ಲಿ ಎ.ಎಸ್.ಪಿ.ಸೈದುಲು ಅಡಾವತ್ ಚಾಲನೆ ನೀಡಿದರು.
ಮೆಲ್ಕಾರ್ ನಿಂದ ಬಿಸಿರೋಡಿನ ವರೆಗೆ ದ್ವಿಚಕ್ರವಾಹನ ಜಾಥ ನಡೆಸಿದರು. ಬಿಸಿರೋಡಿನಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಕಿರು ನಾಟಕ ಪ್ರದರ್ಶನ ನೀಡಿದರು.

ರಸ್ತೆ ನಿಯಮಗಳನ್ನು ಪಾಲಿದಿದ್ದರೆ ಅಗುವ ಅನಾಹುತಗಳ ಬಗ್ಗೆ ಮತ್ತು ಕಾನೂನಿನ ಅರಿವು ಮೂಡಿಸುವ ಸಲುವಾಗಿ ಪ್ರದರ್ಶನ ನೀಡಿದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗ್ಡೆ, ಸಾರಿಗೆ ನಿರೀಕ್ಷಕ ಚರಣ್ , ವ್ರತ್ತ ಟಿ.ಡಿ.ನಾಗರಾಜ್,
ಟ್ರಾಪಿಕ್ ಎಸ್.ಐ.ಮಂಜುಳಾ, ನಗರ ಠಾಣಾ ಎಸ್. ಐ.ಚಂದ್ರಶೇಖರ್, ಅಪರಾದ ವಿಭಾಗದ ಎಸ್.ಐ.ಹರೀಶ್, ಗ್ರಾಮಾಂತರ ಎಸ್.ಐ.ಪ್ರಸನ್ನ, ಟ್ರಾಫಿಕ್ ಪಿ.ಎಸ್. ಐ.ಮಹಮ್ಮದ್ ಕೆ ಮತ್ತು ಸಿಬ್ಬಂದಿ ಗಳು ಉಪಸ್ಥಿತರಿದ್ದರು.












