Wednesday, February 12, 2025

ಬೊರ್ ವೆಲ್ ಎಂದು ಪೈಪ್ ಲೈನ್ ಒಡೆದರು…..ವಿಚಿತ್ರವಾದರೂ ಸತ್ಯ!

ಬಂಟ್ವಾಳ: ಬೊರ್ ವೆಲ್ ತೋಡಿದಾಗ ನೀರು ಸಿಕ್ಕಿತು ಎಂದು ಖುಷಿಯಿಂದ ಕುಣಿದು ಕುಪ್ಪಳಿಸಿದ ನಾಗರಿಕರಿಗೆ ಕೆಲಕ್ಷಣದಲ್ಲಿಯೇ  ನಿರಾಸೆ ಉಂಟಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯತ್ ಅನುದಾನದಲ್ಲಿ ತೊಡಲಾದ ಬೊರ್ ವೆಲ್ ಅದು ಪೈಪ್ ಲೈನ್ ತುಂಡು ಮಾಡಿದೆ ಎಂದು ಗೊತ್ತಾದಾಗ ಅಲ್ಲಿನ ಜನರಿಗೆ ಶಾಕ್ ಆಗಿದೆ.
ಈ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹರಿದಾಡುತ್ತಿದೆ.
ಘಟನೆಯ ವಿವರ:
ಸಜೀಪ ಮೂಡ ಗ್ರಾಮ ಪಂಚಾಯತ್ ಅನುದಾನದಲ್ಲಿ ಕಂದೂರು ನಲ್ಲಿ ಕುಡಿಯುವ ನೀರಿನ ಪೂರೈಕೆ ಗಾಗಿ  ಬೋರ್ ಹಾಕಲು ಇಂದು ಸಂಜೆ ನಿಗದಿಪಡಿಸಲಾಗಿತ್ತು.
ನೀರು ಪರಿಶೋಧಕರು ನೀರು ಮೇಲ್ಬಾಗದಲ್ಲಿ ಸಿಗುತ್ತದೆ ಅಂಥ ಸೂಚನೆ ನೀಡಿ ಜಾಗ ಖಾತರಿಪಡಿಸಿದರು ,ಈದೀಗ ಬೋರ್ ವೇಲ್ ಲಾರಿ ಕೆಲಸ ಆರಂಭಿಸಿ ಕ್ಷರ್ಣದಲ್ಲಿ ರಭಸವಾಗಿ ನೀರು ಹೊರ ಚೆಮ್ಮಿತು, ಪರಿಸರದಲ್ಲಿ ನೀರಿನ ಹೊಳೆಯೇ ಹರಿಯಿತು, ಕೆಲಸಗಾರರಿಗೆ ಮತ್ತು ಸ್ಥಳೀಯರಿಗೆ ಆಶ್ಚರ್ಯದ ನಡುವೆ ಸಡಗರ ಸಂಭ್ರಮ ಮುಗಿಲು ಮುಟ್ಟಿತು, ಬಾರಿ ಜನ ಸೇರಿತ್ತು. ನೀರು ಸಿಕ್ಕಿದಾಗ ಯಾರಿಗೆ ತಾನೇ ಖುಷಿ ಆಗಲ್ಲ ನೀವೇ ಹೇಳಿ, ಆಮೇಲೆ?
ಈ ಸಂತೋಷ ಕ್ಷಣಕಾಲ ಮಾತ್ರ ಮತ್ತೆ ಗೊತ್ತಾಯಿತು ಅದು ಕೊಣಜೆಗೆ ನೀರು ಸರಬರಾಜು ಆಗುವ ಪೈಪ್ ಹೊಡೆದದ್ದು ಅಂಥ.
ಸ್ಥಳೀಯರಿಗೆ ನಿರಾಸೆಯ ನಡುವೆ  ನಗುವಿಗೆ ಪಾರವೇ ಇರಲಿಲ್ಲ. ಬಳಿಕ ನೀರು ಸರಬರಾಜು ಮಾಡಲು ಮರು ಕಾಮಗಾರಿ ನಡೆಯಿತು.
ಇಂತಹ ಘಟನೆಗಳು ನಡೆಯುವ ಮುನ್ನವೇ ಎಚ್ಚೆತ್ತುಕೊಂಡು ಕೆಲಸ ಮಾಡಿದ್ದರೆ ಪೈಪ್ ನ ಕಾಮಗಾರಿಯ ಹಣವು ಉಳಿಯುತ್ತಿತ್ತು.

More from the blog

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...