Wednesday, July 9, 2025

ಬೊರ್ ವೆಲ್ ಎಂದು ಪೈಪ್ ಲೈನ್ ಒಡೆದರು…..ವಿಚಿತ್ರವಾದರೂ ಸತ್ಯ!

ಬಂಟ್ವಾಳ: ಬೊರ್ ವೆಲ್ ತೋಡಿದಾಗ ನೀರು ಸಿಕ್ಕಿತು ಎಂದು ಖುಷಿಯಿಂದ ಕುಣಿದು ಕುಪ್ಪಳಿಸಿದ ನಾಗರಿಕರಿಗೆ ಕೆಲಕ್ಷಣದಲ್ಲಿಯೇ  ನಿರಾಸೆ ಉಂಟಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯತ್ ಅನುದಾನದಲ್ಲಿ ತೊಡಲಾದ ಬೊರ್ ವೆಲ್ ಅದು ಪೈಪ್ ಲೈನ್ ತುಂಡು ಮಾಡಿದೆ ಎಂದು ಗೊತ್ತಾದಾಗ ಅಲ್ಲಿನ ಜನರಿಗೆ ಶಾಕ್ ಆಗಿದೆ.
ಈ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹರಿದಾಡುತ್ತಿದೆ.
ಘಟನೆಯ ವಿವರ:
ಸಜೀಪ ಮೂಡ ಗ್ರಾಮ ಪಂಚಾಯತ್ ಅನುದಾನದಲ್ಲಿ ಕಂದೂರು ನಲ್ಲಿ ಕುಡಿಯುವ ನೀರಿನ ಪೂರೈಕೆ ಗಾಗಿ  ಬೋರ್ ಹಾಕಲು ಇಂದು ಸಂಜೆ ನಿಗದಿಪಡಿಸಲಾಗಿತ್ತು.
ನೀರು ಪರಿಶೋಧಕರು ನೀರು ಮೇಲ್ಬಾಗದಲ್ಲಿ ಸಿಗುತ್ತದೆ ಅಂಥ ಸೂಚನೆ ನೀಡಿ ಜಾಗ ಖಾತರಿಪಡಿಸಿದರು ,ಈದೀಗ ಬೋರ್ ವೇಲ್ ಲಾರಿ ಕೆಲಸ ಆರಂಭಿಸಿ ಕ್ಷರ್ಣದಲ್ಲಿ ರಭಸವಾಗಿ ನೀರು ಹೊರ ಚೆಮ್ಮಿತು, ಪರಿಸರದಲ್ಲಿ ನೀರಿನ ಹೊಳೆಯೇ ಹರಿಯಿತು, ಕೆಲಸಗಾರರಿಗೆ ಮತ್ತು ಸ್ಥಳೀಯರಿಗೆ ಆಶ್ಚರ್ಯದ ನಡುವೆ ಸಡಗರ ಸಂಭ್ರಮ ಮುಗಿಲು ಮುಟ್ಟಿತು, ಬಾರಿ ಜನ ಸೇರಿತ್ತು. ನೀರು ಸಿಕ್ಕಿದಾಗ ಯಾರಿಗೆ ತಾನೇ ಖುಷಿ ಆಗಲ್ಲ ನೀವೇ ಹೇಳಿ, ಆಮೇಲೆ?
ಈ ಸಂತೋಷ ಕ್ಷಣಕಾಲ ಮಾತ್ರ ಮತ್ತೆ ಗೊತ್ತಾಯಿತು ಅದು ಕೊಣಜೆಗೆ ನೀರು ಸರಬರಾಜು ಆಗುವ ಪೈಪ್ ಹೊಡೆದದ್ದು ಅಂಥ.
ಸ್ಥಳೀಯರಿಗೆ ನಿರಾಸೆಯ ನಡುವೆ  ನಗುವಿಗೆ ಪಾರವೇ ಇರಲಿಲ್ಲ. ಬಳಿಕ ನೀರು ಸರಬರಾಜು ಮಾಡಲು ಮರು ಕಾಮಗಾರಿ ನಡೆಯಿತು.
ಇಂತಹ ಘಟನೆಗಳು ನಡೆಯುವ ಮುನ್ನವೇ ಎಚ್ಚೆತ್ತುಕೊಂಡು ಕೆಲಸ ಮಾಡಿದ್ದರೆ ಪೈಪ್ ನ ಕಾಮಗಾರಿಯ ಹಣವು ಉಳಿಯುತ್ತಿತ್ತು.

More from the blog

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...

ಜು.10ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

ಬಿ.ಸಿ. ರೋಡ್ : ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ...

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಲಕ್ಷ ಕುಂಕುಮಾರ್ಚನೆ..

ಪೊಳಲಿ: ಶ್ರೀ ಮೃತ್ಯುಂಜಯೇಶ್ವರ ಶಿವ ಕ್ಷೇತ್ರಗಂಜಿಮಠ ಪುನರುತ್ಥಾನ ಶ್ರೀ ಮೃತ್ಯುಂಜಯೇಶ್ವರ ಶಿವ ಕ್ಷೇತ್ರ ಪುನರ್ ನಿರ್ಮಾಣದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದAತೆ ಜು.೮ರಂದು ಮಂಗಳವಾರ ಶ್ರೀ ಕ್ಷೇತ್ರ ಪೊಳಲಿ ಸಾವಿರ ಸೀಮೆಯ...

Protest : ಎಸ್.ಡಿ.ಪಿ‌.ಐ. ಪಕ್ಷದ ವತಿಯಿಂದ ಕೈಕಂಬದ ಬಳಿ ಬೃಹತ್ ಪ್ರತಿಭಟನೆ..

ಬಂಟ್ವಾಳ: ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸಿದ ಸರಕಾರದ ನಡೆಯನ್ನು ಖಂಡಿಸಿ, ನ್ಯಾಯ ಮರೀಚಿಕೆ...ಹುಸಿಯಾದ ಭರವಸೆ ಎಂಬ ಘೋಷ ವಾಕ್ಯದಲ್ಲಿ...