ಬಂಟ್ವಾಳ: ಘನಗಾತ್ರದ ವಾಹನಗಳು ಪಾಣೆಮಂಗಳೂರು ಹಳೆಯ ಸೇತುವೆಯ ಮೂಲಕ ಸಂಚಾರ ಮಾಡುವುದರಿಂದ ನಿತ್ಯವೂ ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಜೊತೆಗೆ ಪಾಣೆಮಂಗಳೂರು ಪೇಟೆಯಲ್ಲಿಯೂ ಬ್ಲಾಕ್ ತಪ್ಪಿದ್ದಲ್ಲ. ಕಳೆದ ಕೆಲ ತಿಂಗಳಿನಿಂದ ರಾಷ್ಟ್ರೀಯ ಹೆದ್ದಾರಿ ಯಲ್ಲಿನ ಹೊಂಡಗುಂಡಿಗಳಿಂದ ತಪ್ಪಿಸಿಕೊಳ್ಳಲು ಘನಗಾತ್ರದ ವಾಹನಗಳ ಸವಾರರು ಪಾಣೆಮಂಗಳೂರು ಪೇಟೆಯ ಮೂಲಕ ಹಳೆ ಸೇತುವೆಯಲ್ಲಿ ಸಂಚಾರ ಮಾಡುತ್ತಿದ್ದಾರೆ.


ಕಳೆದ ಎರಡು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ತೇಪೆ ಕಾರ್ಯ ನಡೆಸುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಬಸ್ ಸಹಿತ ಲಾರಿಗಳು ಇದೇ ಹಳೆಯ ಸೇತುವೆಯಲ್ಲಿ ಸಂಚಾರ ಮಾಡುತ್ತಿದ್ದು ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಈ ಹಳೆಯ ಸೇತುವೆ ದುರ್ಬಲವಾಗಿದ್ದು ಘನಗಾತ್ರದ ವಾಹನಗಳು ಸಂಚಾರ ಮಾಡಬಾರದು ಎಂಬ ನಾಮಫಲಕ ಸೇತುವೆ ಎರಡು ಬದಿಗಳಲ್ಲಿ ಹಾಕಲಾಗಿದೆ.
ಆದರೆ ಈ ಬೋರ್ಡ್ ನೇತಾಡಿಕೊಂಡಿದೆ ವಿನಃ ಯಾವುದೇ ಪ್ರಯೋಜನವಾಗಿಲ್ಲ. ಹಳೆಯ ಕಾಲದ ದುರ್ಬಲ ಸೇತುವೆಯ ಮುರಿದು ಬೀಳುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತವಾದ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕ ಆಗ್ರಹವಾವಾಗಿದೆ.

