ಬಂಟ್ವಾಳ: ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಈ ದಿನ ಗೃಹ ಕಚೇರಿ ಕೃಷ್ಣಾದಲ್ಲಿ ಬೇಟಿಯಾದರು. ಬಾಳ್ತಿಲ ಗ್ರಾಮದ ರಾಜೇಶ್ ಆಚಾರ್ಯ ಎಂಬವರ ಪತ್ನಿ ವಸಂತಿ ಎಂಬವರು ಬೆನ್ನುಹುರಿ ಮುರಿತದಿಂದ ಹಾಸಿಗೆ ಹಿಡಿದಿದ್ದು ಚಿಕಿತ್ಸೆಗಾಗಿ ಮಾನವೀಯ ನೆಲೆಯಲ್ಲಿ ಸ್ಪಂದಿಸಲು ಮಾನ್ಯ ಮುಖ್ಯಮಂತ್ರಿ ಯವರಲ್ಲಿ ವಿನಂತಿಸಿದಾಗ ವಿಶೇಷ ಪ್ರಕರಣವೆಂದು ಪರಿಗಣಿಸಿ ರೂ. 5 ಲಕ್ಷ ಚಿಕಿತ್ಸಾ ವೆಚ್ಚ ನೀಡಲು ಸಮ್ಮತಿಸಿದರು.


ಇತ್ತೀಚೆಗೆ ಶಾಸಕರು ವಸಂತಿಯವರ ಮನೆಗೆ ಬೇಟಿ ನೀಡಿ ಪರಿಸ್ಥಿಯನ್ನು ತಿಳಿದು ಚಿಕಿತ್ಸೆಗಾಗಿ ಸಹಕರಿಸುವ ಭರವಸೆ ನೀಡಿದ್ದರು.