ಬಂಟ್ವಾಳ: ಫರಂಗಿಪೇಟೆ ಟೀಮ್ ವೀರಾಂಜನೇಯ ತಂಡದ ವತಿಯಿಂದ 73ನೇ ಸ್ವಾತಂತ್ರ ದಿನಾಚರಣೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವು ಮಂಗಳೂರು ತಾ.ನ ತೊಕ್ಕೊಟ್ಟು ಸಮೀಪದ ಕುತ್ತಾರ್ ಬಾಲಸಂರಕ್ಷಣಾ ಕೇಂದ್ರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲ ಸಂರಕ್ಷಣಾ ಕೇಂದ್ರ ಕುತ್ತಾರ್ ಸಂಚಾಲಕರಾದ ಬಾಲಕೃಷ್ಣ ಭಟ್ ವಹಿಸಿದ್ದರು.


ಆಶ್ರಮದ ಸಂಚಾಲಕರದಂತಹ ಡಾ. ಅನಂತ ಕೃಷ್ಣ ಭಟ್ ರಕ್ಷಾ ಬಂಧನದ ಮಹತ್ವವನ್ನು ತಿಳಿಸಿದರು.
ಬಾಲಸಂರಕ್ಷಣಾ ಕೇಂದ್ರದಲ್ಲಿರುವ ಅರುಣಚಲ್ ಪ್ರದೇಶ್, ಮೇಘಾಲಯ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕರ್ನಾಟಕ, ಕೇರಳ ಹಾಗೂ ಇನ್ನಿತರ ರಾಜ್ಯಗಳ ಬಾಲಕ-ಬಾಲಕಿಯರ ರಕ್ಷಣೆ ಹಾಗೂ ಸಂರಕ್ಷಣೆಗೆ ನಾವು ಸದಾ ಬದ್ಧ ಎಂಬ ಆಶಯದಿಂದ ರಕ್ಷಾಬಂಧನವನ್ನು ಬಾಲಕ-ಬಾಲಕಿಯರಿಗೆ ಹಾಗೂ ತಂಡದ ಸದಸ್ಯರು ಪರಸ್ಪರ ಕಟ್ಟಿಸಿಕೊಂಡು ಮಕ್ಕಳಿಗೆ ಫಲವಸ್ತುಗಳನ್ನು ವಿತರಿಸಿ ವಿಶಿಷ್ಟರೀತಿಯಲ್ಲಿ ರಕ್ಷಾ ಬಂಧನಕಾರ್ಯಕ್ರಮವನ್ನು ಆಚರಿಸಲಾಯಿತು.
ಅರ್ಕುಳ ಗ್ರಾಮ ಪಂಚಾಯತ್ ನ ಸದಸ್ಯರಾದ ಸುಕುಮಾರ್ ಕರ್ಕೇರ, ಪ್ರಶಾಂತ್ ಪೂಜಾರಿ, ಲೋಹಿತ್ ಕರ್ಕೇರಾ ತಂಡದ ಮಹಿಳಾ ಸದಸ್ಯೆ ಮಮತಾ ಕುತ್ತಾರು,ಚೈತ್ರಾಂಜಲಿ ,ಸ್ವಾತಿ , ಕಾವ್ಯ ಹಾಗು ತಂಡದಸದಸ್ಯರು ಉಪಸ್ಥಿತರಿದ್ದರು. ಮನ್ವಿತ್ ಕರ್ಕೇರ ಕಾರ್ಯ ಕ್ರಮ ನಿರೂಪಿಸಿದರು.