ಬಂಟ್ವಾಳ : 18 ವರ್ಷ ಪೂರ್ಣಗಳಿಸಿದ ಎಲ್ಲಾ ವಿದ್ಯಾರ್ಥಿಗಳು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು. ದೇಶದ ಅಭಿವೃದ್ಧಿಯಲ್ಲಿ ಉತ್ತಮ ಸರಕಾರದ ರಚನೆ ಹಾಗೂ ಸಂವಿಧಾನ ಕರ್ತೃಗಳ ದೂರದೃಷ್ಟಿ ಈಡೇರಬೇಕಾದರೆ ಚುನಾವಣೆಯ ಪಾತ್ರ ಮುಖ್ಯ. ಅರ್ಹ ಮತದಾರರೆಲ್ಲರೂ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿ ದೇಶದ ಏಳಿಗೆಯಲ್ಲಿ ಕೈ ಜೋಡಿಸೋಣ ಎಂದು ಚುನಾವಣಾ ಸಾಕ್ಷರ ಕ್ಲಬ್ನ ನೋಂದಣ ಅಧಿಕಾರಿಯಾಗಿರುವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ರೂಪಾ ನುಡಿದರು
ಅವರು ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು,ಬಂಟ್ವಾಳ ರಾಷ್ಟೀಯ ಮತದಾರ ದಿನಾಚರಣೆಯ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪಾಂಶುಪಾಲರಾದ ಡಾ.ಪಾಂಡುರಂಗ ನಾಯಕ್ ಇವರು ವಹಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಚುನಾವಣಾ ಸಾಕ್ಷರ ಕ್ಲಬ್ನ ಉಪಾಧ್ಯಕ್ಷೆ ತಸ್ರೀಫಾ ಮತದಾರ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಚುನಾವಣಾ ಸಾಕ್ಷರ ಕ್ಲಬ್ನ ಸಲಹೆಗಾರರು ಹಾಗೂ ಎಲ್ಲ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಿಶ್ಮಿತಾ ಸ್ವಾಗತಿಸಿ, ಸತೀಶ್ ವಂದಿಸಿದರು. ವಿಜೇತ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ರಾಜ್ಯಶಾಸ್ತ್ರ ಉಪನ್ಯಾಸಕಿ ರೂಪ ಮತದಾನದ ಹಕ್ಕು ಈ ಕುರಿತಾಗಿ ಪಿ.ಪಿ.ಟಿ ಹಾಗು ವೀಡಿಯೋ ಕ್ಲಿಪಿಂಗ್ಸ್ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
