ಬಂಟ್ವಾಳ: ಗಂಜಿಮಠದಲ್ಲಿ ಪೆಟ್ರೋಲ್ ಪಂಪ್ ನ ಪೆಟ್ರೋಲ್ ಬಾವಿಯ ಸ್ಲ್ಯಾಬ್ ಕೆಲಸ ಮಾಡುವಾಗ ಬಾವಿ ಕುಸಿದು ಮೃತಪಟ್ಟಿರುವ ಸಿದ್ದಕಟ್ಟೆಯ ಕಟ್ಟಡ ಕಾರ್ಮಿಕರಾದ ವೆಂಕಪ್ಪರವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ, ರತ್ನಕುಮಾರ್ ಚೌಟ, ತಾ.ಪಂ ಸದಸ್ಯ ಪ್ರಭಾಕರ ಪ್ರಭು, ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಹಲಕ್ಕೆ, ಉಮೇಶ್ ಗೌಡ, ಸುರೇಶ್ ಕುಲಾಲ್, ವಿಮಲ, ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು.
