ಬಂಟ್ವಾಳ: ಬಂಟ್ವಾಳ ಶಾಸಕಾರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು, ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಮೆಬೆಲ್ ಡಿ ಸೋಜಾ, ನಗರ ನೀರು ಸರಬರಾಜು ಇಂಜಿನೀಯರ್ ಶೋಭಾಲಕ್ಷ್ಮಿ, ಇಂಜಿನೀಯರ್ ಡೊಮಿನಿಕ್ ಡಿಮೆಲ್ಲೋ, ಸರಪಾಡಿಯಲ್ಲಿ ನೇತ್ರಾವತಿ ನದಿ ಅಡ್ಡಲಾಗಿ ಕಟ್ಟಿರುವ ಎಂ.ಆರ್.ಪಿ.ಎಲ್ ಡ್ಯಾಂನಲ್ಲಿರುವ ಪರಿಸ್ಥಿತಿ ಅವಲೋಕಿಸಿದರು.



ಡ್ಯಾಂನ ಮೇಲ್ಭಾಗದಲ್ಲಿ ಮರಳು ತುಂಬಿದ್ದು ನೀರಿನ ಕೆಳ ಹರಿವಿಗೆ ತೊಂದರೆಯಾಗುತ್ತಿರುವ ಬಗ್ಗೆ ಪರಿಶೀಲನೆ ಮಾಡಿ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಮರಳು ತೆರವು ಮಾಡಿ ನೀರು ಸರಾಗ ಹರಿಯುವ ಮೂಲಕ ಬಂಟ್ವಾಳ ಹಾಗೂ ಮಂಗಳೂರಿನ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬಿ.ದೇವದಾಸ ಶೆಟ್ಟಿ, ಗಣೇಶ್ ರೈ ಮಾಣಿ ಮತ್ತು ಎಂ.ಆರ್.ಪಿ.ಎಲ್ ಡ್ಯಾಂನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.