Monday, February 10, 2025

ಬರಿದಾಗುತ್ತಿದೆ ಕಾರಿಂಜೇಶ್ವರನ ಒಡಲು: ಮೊಗರೋಡಿ ಸಂಸ್ಥೆಯವರು ತೀರ್ಥ ಸ್ನಾನದ ಕೆರೆಯ ನೀರು ದುರ್ಬಳಕೆ

ಬಂಟ್ವಾಳ: ಎಪ್ರಿಲ್, ಮೇ ತಿಂಗಳು ನೀರು ಕಡಿಮೆಯಾಗುವಂತಹ ಸಮಯ. ಎಲ್ಲಾ ಕಡೆಗಳಲ್ಲಿ ಯೂ ಕುಡಿಯುವ ನೀರಿಗಾಗಿ ಹಾಹಾಕಾರಗಳು ಕೇಳಿ ಬರುವ ಸಮಯ.
ಈ ಬಾರಿಯೂ ದ.ಕ.ಜಿಲ್ಲೆಯ ಹಲವು ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಕೂಗು ಕೇಳಿ ಬಂದಿದೆ. ಕುಡಿಯಲು ನೀರಿಲ್ಲದ ಇಂತಹ ಸಮಯದಲ್ಲಿ ಕಂಪೆನಿಯೊಂದು ಕಾರಿಂಜೇಶ್ವರನ ತೀರ್ಥ ಸ್ನಾನದ ಕೆರೆಯಿಂದ ನೀರನ್ನು ರಸ್ತೆಯ ಕಾಮಾಗಾರಿಗೆ ಬಳಸುತ್ತಿದ್ದು ಸಾರ್ವಜನಿಕ ವಲಯದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದೆ.

ಬಂಟ್ವಾಳ ದಿಂದ ಪುಂಜಾಲಕಟ್ಟೆ ಯವರೆಗೆ ನಡೆಯುವ ಚತುಷ್ಪತ ಕಾಮಗಾರಿಗೆ ಈ ನೀರನ್ನು ಬಳಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಾವಳಮೂಡೂರು ಗ್ರಾಮ‌ಪಂಚಾಯತ್ ವ್ಯಾಪ್ತಿಯಲ್ಲಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ವಗ್ಗ ಕಾರಿಂಜೇಶ್ವರ ದೇವಸ್ಥಾನದ ಗದಾ ತೀರ್ಥದ ಒಡಲು ಖಾಲಿಯಾಗುತಿದೆ ಆದರೂ ಸ್ಥಳೀಯ ನಾಯಕರೆಲ್ಲ ಮೌನರಾಗಿದ್ದರೆ .

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಸುತ್ತಿರುವ ಸುದಾಕರ ಶೆಟ್ಟಿ ಅವರ ಮೊಗರೋಡಿ ಖಾಸಗಿ ಸಂಸ್ಥೆ ಯು ನೀರನ್ನು ಅಕ್ರಮವಾಗಿ ದಿನಕ್ಕೆ 100 ಟ್ಯಾಂಕರಿಗಿಂತಲೂ ಅಧಿಕವಾಗಿ ತೆಗೆಯುತ್ತಿದ್ದು ಗದಾ ತೀರ್ಥದ ಕೆರೆಯು ಬರಿದಾಗಬಹುದು ಇದರಿಂದ ಕ್ಷೇತ್ರದ ಪಾವಿತ್ರ್ಯತೆಗೆ ದಕ್ಕೆ ಬರಬಹುದು ಕ್ಷೇತ್ರದ ಸಮಿತಿಯು ಮತ್ತು ಅಲ್ಲಿನ ಸರಕಾರಿ ಅಧಿಕಾರಿಗಳು ಮೌನರಾಗಿರುವುದು ಸಂಶಯಾಸ್ಪದಕವಾಗಿದೆ .

ನಾಲ್ಕು ಕಡೆಗಳಲ್ಲಿ ಕೆರೆಗೆ ಪೈಪ್ ಗಳನ್ನು ಅಳವಡಿಸಿದ್ದು ನಾಲ್ಕು ಟ್ಯಾಂಕ್ ರುಗಳ ಮೂಲಕ ದಿನಪೂರ್ತಿ ಇಲ್ಲಿಂದ ನೀರನ್ನು ಪಂಪ್ ಮಾಡಿ ಕೊಂಡುಹೋಗಲಾಗುತ್ತಿದೆ.
ಮಳೆ ಇರಲಿ ಬೇಸಿಗೆ ಇರಲಿ ಈ ಕೆರೆಯ ನೀರು ಸಿಹಿ ಯಾಗಿರುತ್ತದೆ. ಸಾಕಷ್ಟು ಹಿನ್ನಲೆ ಇರುವ ಈ ತೀರ್ಥ ಸ್ನಾನ ದ ಕೆರೆಯ ನೀರನ್ನು ಅಕ್ರಮವಾಗಿ ಖಾಸಗಿ ಸಂಸ್ಥೆ ಬಳಸುತ್ತಿರುವುದಕ್ಕೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದ್ದಲ್ಲದೆ ಜಿಲ್ಲಾಧಿಕಾರಿ ಅವರು ಸೂಕ್ತ ಕ್ರಮಕೈಗೊಳ್ಳಲು ವಿನಂತಿ ಸಿದ್ದಾರೆ. ದಯವಿಟ್ಟು ಶಾಸಕರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿ ವಿನಂತಿಯನ್ನು ಸ್ಥಳೀಯರು ಮಾಡಿದ್ದಾರೆ.

More from the blog

ಯುವ ಸಂಗೀತೋತ್ಸವಕ್ಕೆ ಚಾಲನೆ

ಮಂಗಳೂರು: ಸಾಮಾಜಿಕ ಸ್ವಾಸ್ಥ್ಯ ಕ್ಕಾಗಿ ಮಾನಸಿಕ ನೆಮ್ಮದಿ ನೀಡುವಂತಹ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್...

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ…. ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ*

  ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ...

ಜುಗಾರಿ ಅಡ್ಡೆಗೆ ದಾಳಿ: ಹತ್ತು ಜನರ ಬಂಧನ

ಬಂಟ್ವಾಳ: ಹಣ ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಹಾಗೂ ಸಾವಿರಾರು...

ಮಾರ್ಬಲ್ ಲಾರಿ ಪಲ್ಟಿ

ಬಂಟ್ವಾಳ: ಮಾರ್ಬಲ್ ಲೋಡ್ ಲಾರಿಯೊಂದು ತಾಂತ್ರಿಕ ದೋಷದಿಂದ ರಸ್ತೆಯ ವಿಭಾಜಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಷ್ಟ್ರೀಯ ಮಂಗಳೂರು- ಬೆಂಗಳೂರು ರಸ್ತೆಯ ತುಂಬೆ ಸಮೀಪದ ರಾಮಲ್ ಕಟ್ಟೆ ಎಂಬಲ್ಲಿ ಪಲ್ಟಿಯಾಗಿದೆ. ಘಟನೆಯಿಂದ ಯಾವುದೇ ಅಪಾಯ...