ಬಂಟ್ವಾಳ: ಕೊರೊನೊ ಜಾಗೃತಿಗಾಗಿ ಯಾವ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳು ನಡೆಯುತ್ತಾ ಇದೆ ಎಂಬ ಬಗ್ಗೆ ಪರಿಸ್ಥಿತಿ ಅವಲೋಕನ ಮತ್ತು ವಿಮರ್ಶೆ ಗಾಗಿ ಮಂಗಳೂರು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ! ಸೆಲ್ವಮಣಿ ಮತ್ತು ಮಂಗಳೂರು ಪೋಲಿಸ್ ವರಿಷ್ಠಾಧಿಕಾರಿ ಲಕ್ಮೀಪ್ರಸಾದ್ ಬಂಟ್ವಾಳ ತಾಲೂಕಿಗೆ ಬೇಟಿ ನೀಡಿದ್ದರು.
ಬಳಿಕ ಬಂಟ್ವಾಳ ಪ್ರವಾಸಿ ಬಂಗಲೆಯಲ್ಲಿ ತಾಲೂಕಿನ ಅಧಿಕಾರಿಗಳ ಜೊತೆ ಕೆಲವು ಮಾಹಿತಿ ಪಡೆದುಕೊಂಡು ಬಳಿಕ ಸಿ.ಟಿ.ರೌಂಡ್ಸ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್. ತಾಲೂಕು ಆರೋಗ್ಯಾಧಿಕಾರಿ ದೀಪಾಪ್ರಭು, ಡಿ.ವೈ.ಎಸ್. ಪಿ. ವೆಲಂಟೈನ್ ಡಿ. ಸೋಜ, ವೃತ್ತ ನಿರೀಕ್ಷಕ. ಟಿ.ಡಿ.ನಾಗರಾಜ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.














