Wednesday, February 12, 2025

ದಸ್ತಾವೇಜು ಬರಹಗಾರ ಪದ್ಮನಾಭ ಬನ್ನಿಂತಾಯ ನಿಧನ

ಬಂಟ್ವಾಳ: ಹಿರಿಯ ಅನುಭವಿ ದಸ್ತಾವೇಜು ಬರಹಗಾರ, ಧಾರ್ಮಿಕ ಸಾಮಾಜಿಕ ಮುಂದಾಳು ಕೆ.ಪಿ.ಬನ್ನಿಂತಾಯ ವಿಧಿವಶ.
ಬಿಸಿರೋಡ್ ನಿವಾಸಿ ಕೆ.ಪದ್ಮನಾಭ ಬನ್ನಿಂತಾಯ ( 73) ಅವರು ಇಂದು ಸುಮಾರು 7.30 ರ ವೇಳೆ ಹ್ರದಯಘಾತದಿಂದ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

ಬಂಟ್ವಾಳ ತಾಲೂಕಿನ ಅನಂತಾಡಿ ಕೊಬ್ರಿಮಠ ನಿವಾಸಿ ದಿ! ಗೋಪಾಲ ಕ್ರಷ್ಣ ಬನ್ನಿಂತಾಯ ಅವರ ಪುತ್ರ ಕೆ.ಪದ್ಮನಾಭ ಬನ್ನಿಂತಾಯ ಅವರು ಬಿಸಿರೋಡಿನ ವಕೀಲರಾದ ಕೆ.ಕೇಶವ ಭಟ್ ಅವರ ಜೊತೆ ಗುಮಾಸ್ತ ರಾಗಿ ಕೆಲಸ ಮಾಡಿದ ಬಳಿಕ ಎನ್.ಕೆ‌.ಕಾಂಪ್ಲೆಕ್ಸ್ ನಲ್ಲಿ ಸ್ವಂತ ದಸ್ತಾವೇಜು ಬರಹಗಾರರಾಗಿ ಸುಮಾರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಸಾಮಾಜಿಕ ವಾಗಿಯೂ ಗುರುತಿಸಿ ಕೊಂಡ ಇವರು ನೇತ್ರಾವತಿ ಜ್ಯೂನಿಯರ್ ಜೇಸಿಯ ಸ್ಥಾಪಕ ಸದಸ್ಯ ಹಾಗೂ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನ ದ ಕೋಶಾಧಿಕಾರಿ ಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ದಸ್ತಾವೇಜು ಬರವಣಿಗೆಯ ಮೂಲಕ ಚಿರಪರಿಚಿತ ರಾಗಿರುವ ಇವರ ಕೆಲಸದ ಪ್ರಾಮಾಣಿಕತೆ ಉತ್ತಮ ನಡವಳಿಕೆ ಇತರರಿಗೆ ಮಾದರಿಯಾಗಿದೆ.
ಇವರು ಒರ್ವ ಪುತ್ರ,ಒರ್ವಳು ಪುತ್ರಿ, ಸೊಸೆ ಹಾಗೂ ಅಳಿಯ , ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.

More from the blog

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...