Wednesday, January 28, 2026

ಬಂಟ್ವಾಳದ ಭಂಡಾರ್ಕಾರ್ ಮೋದಿ ಪ್ರಧಾನಿಯಾಗಲು ಗಡ್ಡ ಬೆಳೆಸಿದ್ದಂತೆ

ಬಂಟ್ವಾಳ : ಮೋದಿ ಅಭಿಮಾನಿಗಳು ಬೇರೆ ಬೇರೆ ವೇಷಭೂಷಣ ದಲ್ಲಿ ದೇಶದ ಎಲ್ಲೆಡೆ ಇರುವುದು ಮಾಮೂಲಿ ಆದರೆ
ಇಲ್ಲೊಬ್ಬರು ಮೋದಿ ಅಭಿಮಾನಿ ಮಾತ್ರ ಕಳೆದ ಒಂದು ವರ್ಷದಿಂದ ತನ್ನ ಗಡ್ಡ ಮತ್ತು ತಲೆಯ ಕೂದಲಿಗೆ ಕತ್ತರಿ ಹಾಕದೆ ಮೋದಿ ಪ್ರಧಾನಿಯಾಗಬೇಕು ಎಂದು ಕಾದವರು.

ದ ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಬಂಟ್ವಾಳದ ಕೋಶಾಧಿಕಾರಿ ಬಾಲಾಜಿ ಸರ್ವಿಸ್ ಸ್ಟೇಷನಿನ ಮಾಲಕ ಹಾಗೂ ಜನರ ಸೇವಕ. ನೇರ , ದಿಟ್ಟ , ನಿರಂತರ , ಇವರೇ *ಪ್ರಶಾಂತ್* *ಭಂಡಾರ್ಕಾರ್* ಮೋದಿಯ ಆಡಳಿತಕ್ಕೆ ಮನಸೋತವರು , ಮೋದಿಯ ಅಭಿಮಾನವನ್ನು ಅಲೆಯಾಗಿ ಪರಿವರ್ತಿಸಿದವರು .
ಕಳೆದ ಒಂದು ವರುಷದಿಂದ ತನ್ನ *ಗಡ್ಡ* *ಕೂದಲಿಗೆ* ಕತ್ತರಿ ಹಾಕದೆ *ಮೋದಿಜಿ* ಪ್ರಮಾಣ ವಚನದಂದೇ ಇದಕ್ಕೆ ಮುಕ್ತಿ ಎಂದು ಪ್ರತಿಜ್ಞೆ ಮಾಡಿದವರು. ರಾಷ್ಟ್ರೀಯ ಚಿಂತನೆ ಇವರಲ್ಲಿ ಸದಾ ಹೊರ ಹೊಮ್ಮುತ್ತಿರುತ್ತದೆ ದೇಶದ ಬಗ್ಗೆ ನಕಾರಾತ್ಮಕ ಮಾತಾಡಿದಲ್ಲಿ ಯಾವುದೇ ಮುಲಾಜಿಲ್ಲದೆ ಉಗಿದು ಬಿಡುತ್ತಾರೆ. ಬಂಟ್ವಾಳದ ಜನತೆಯ ಪ್ರೀತಿ ವಿಶ್ವಾಸ ಗಳಿಸಿರುವ *ಪ್ರಶಾಂತಣ್ಣ* ಹಲವಾರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಮೇ 30 ರಂದು ಬಂಟ್ವಾಳ ದ ವಾಸು ಭಂಡಾರಿಯ ಸೆಲೂನ್ ನಲ್ಲಿ ತನ್ನ *ಕೂದಲು* *ಗಡ್ಡ* ಕ್ಕೆ ಮುಕ್ತಿ ನೀಡಲಿದ್ದಾರೆ. ಮೋದಿಜಿ* ಪ್ರಮಾಣ ವಚನದ ನಂತರ ಪ್ರಶಾಂತಣ್ಣ ಹೊಸ ಲುಕ್ ನಲ್ಲಿ ಕಾಣಿಸಿ ಕೊಳ್ಳಲಿದ್ದಾರೆ..

More from the blog

B.C. Road : ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ...

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...

ಸಜೀಪ : ಜ.28, 29,30ರಂದು ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್

ಬಂಟ್ವಾಳ : ಜಲಾಲಿಯ್ಯಾ ಜುಮಾ ಮಸ್ಜಿದ್, ಚಟ್ಟೆಕ್ಕಲ್, ಸಜಿಪ ಇದರ ಆಶ್ರಯದಲ್ಲಿ ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್ ಬುರ್ದಾ ಮಜ್ಲಿಸ್ ಜಿಸ್ತಿಯಾ ಖುತ್‌ಬಿಯತ್ ಜ.28, 29,30 ರಂದು ಜಲಾಲಿಯ್ಯ ಜುಮಾ ಮಸೀದಿ...

ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ – ಒಡಿಯೂರುಶ್ರೀ

ವಿಟ್ಲ: ಸದೃಢ ದೇಶ ನಿರ್ಮಾಣದಲ್ಲಿ ಸೈನಿಕರ ಪರಿಶ್ರಮ, ತ್ಯಾಗ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಒಡಿಯೂರು ರಾಜಾಂಗಣದಲ್ಲಿ...