Friday, July 11, 2025

ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆ: ಕೆದಿಲ ಶ್ರೀ ದೇವೀ ಭಜನಾ ಮಂಡಳಿ ಹಾಗೂ ಧರ್ಮಶ್ರೀ ವಿಶ್ವಸ್ಥ ಮಂಡಳಿ ವತಿಯಿಂದ ಸಂಭ್ರಮಾಚರಣೆ

ಬಂಟ್ವಾಳ: ಗಾಂಧಿನಗರ ಕೆದಿಲ ಶ್ರೀ ದೇವೀ ಭಜನಾ ಮಂಡಳಿ ಹಾಗೂ ಧರ್ಮಶ್ರೀ ವಿಶ್ವಸ್ಥ ಮಂಡಳಿ(ರಿ) ವತಿಯಿಂದ ರಾಮನಯೋಧ್ಯಯಲ್ಲಿ ನಮ್ಮೆಲ್ಲರ ಆರಾಧ್ಯ ಮೂರ್ತಿ ಪ್ರಭು ಶ್ರೀ ರಾಮಚಂದ್ರನ ಭವ್ಯ ಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದ ಸಂಭ್ರಮವನ್ನು ಕೆದಿಲ ಗ್ರಾಮಸ್ಥರು ಸೇರಿ
ವಿಶೇಷವಾಗಿ ಸಂಭ್ರಮಿಸುವ ಒಂದು ಕಾರ್ಯಕ್ರಮ ಶ್ರೀ ದೇವೀ ಭಜನಾ ಮಂದಿರದ ವಠಾರದಲ್ಲಿ ಜರಗಿತು.


ರಾಮನಯೋಧ್ಯಯಲ್ಲಿ ರಾಮ ಮಂದಿರದ ಭೂಮಿ ಪೂಜೆಯು
ಜಗತ್ತಿನ ಹಾಗೂ ಭಾರತ ದೇಶದ ಹಿಂದೂಗಳಿಗೆ‌ ಇಂದು ಆ. 5 ರ ಬುಧವಾರ ಐತಿಹಾಸಿಕ ದಿನ. ಶ್ರೀ ರಾಮ ಭಕ್ತರ ಶತಮಾನಗಳ ತ್ಯಾಗ ಬಲಿದಾನದ ಹೋರಾಟಗಳ ಉದ್ದೇಶ ನನಸಾಗುವ ಕ್ಷಣ
ಶ್ರೀ ರಾಮಚಂದ್ರನ ಭವ್ಯ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಬೆಳಿಗ್ಗೆ 11:40 ಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವಾರು ರಾಮಭಕ್ತ ಕಾರ್ಯಕರ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ಅದೇ ಸಮಯದಲ್ಲಿ ಮಂದಿರ ನಿರ್ಮಾಣದ ಕಾರ್ಯ ಆದಷ್ಟು ಶೀಘ್ರದಲ್ಲಿ, ನಿರ್ವಿಘ್ನವಾಗಿ ನೆರವೇರಲಿ ಎನ್ನುವ ಪ್ರಾರ್ಥನೆಯೊಂದಿಗೆ, ರಾಮನಾಮ ತಾರಕ ಮಂತ್ರ ಪಠಣ ಹಾಗೂ 1990ರ ಆ ಸಮಯದಲ್ಲಿ ಕೆದಿಲ ಗ್ರಾಮದಿಂದ ಅಯೋಧ್ಯ ಗೆ ಕರಸೇವಕರಾಗಿ ತೆರಳಿ ಸೆರೆವಾಸ ಅನುಭವಿಸಿದ ರಾಮ ಭಕ್ತರನ್ನು ನೆನಪಿಸಿ ಗೌರವಿಸುವ ಕಾರ್ಯಕ್ರಮವೂ ನಡೆಯಿತು. 1990ರ ಆ ಸಮಯದಲ್ಲಿ ಕರಸೇವಕರಾಗಿ ತೆರೆಳಿ ಸೆರೆವಾಸ ಅನುಭವಿಸಿದ ರಾಮ್ ಭಟ್ ಮೈರಾ, ಚೆನ್ನಪ್ಪ ಗೌಡ ಕುದುಮಾನು,ಈಶ್ವರ ಸಪಲ್ಯ ವಾಲ್ತಾಜೆ, ಸುಬ್ರಮಣ್ಯ ಭಟ್ ಬಡೆಕ್ಕಿಲ, ಇವರನ್ನು ಗೌರವಿಸಲಾಯಿ. ಕಾರ್ಯಕ್ರಮದಲ್ಲಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು ಹಾಗೂ ಮಂಡಳಿಯ ಪದಾಧಿಕಾರಿಗಳು, ಭಜನಾ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪ ಕುಲಾಲ್ ಕಂಪ ಹಾಗೂ ಮಂಡಳಿಯ ಪದಾಧಿಕಾರಿಗಳು, ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಜೆ. ಕೃಷ್ಣ ಭಟ್ ಮಿರಾವನ ಹಾಗೂ ಕಮಿಟಿಯ ಪದಾಧಿಕಾರಿಗಳು, ಶ್ರೀ ದೇವೀ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು,ನಿವೃತ್ತ ಸೈನಿಕ ಜನಾರ್ಧನ ಕುಲಾಲ್ ಗಾಣದ ಕೊಟ್ಯ, ಪ್ರಮುಖರಾದ ಭೀಮ ಭಟ್ ಮಿರಾವನ, ಮುರಳೀಧರ ಶೆಟ್ಟಿ ಕಲ್ಲಾಜೆ, ಬಾಳಪ್ಪ ಗೌಡ ಕುದುಂಬ್ಲಾಡಿ,ಶ್ರೀ ಕೃಷ್ಣ ಉಪಾದ್ಯಾಯ, ಶಿವಶಂಕರ ಪುತ್ತೂರಾಯ, ಕಾಂತಪ್ಪ ಗೌಡ ಕೊಳಚಪ್ಪು, ಮಾರಪ್ಪ ಸುವರ್ಣ ಪೆರಮುಗೇರು, ನಾರಾಯಣ ಕುಲಾಲ್ ಗಡಿಯಾರ,ಇನ್ನಿತರ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಉಮೇಶ್ ಗಾಂಧಿನಗರ ಕಾರ್ಯಕ್ರಮ ನಿರೂಪಿಸಿದರು. ಮೋನಪ್ಪ ಗೌಡ ಕುದುಮಾನು ವಂದಿಸಿದರು. ಗ್ರಾಮದ ಎಲ್ಲಾ ರಾಮ ಭಕ್ತರಿಗೆ ಭಜನಾ ಮಂಡಳಿ ವತಿಯಿಂದ ಲಘು ಪಾನೀಯ ಮತ್ತು ಸಿಹಿ ತಿಂಡಿ ನೀಡಲಾಯಿತು.

More from the blog

ಬಂಟ್ವಾಳದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಮತ್ತು ಅರಿವು ಕಾರ್ಯಕ್ರಮ.. 

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ, ಬಂಟ್ವಾಳ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಬಂಟ್ವಾಳ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ...

ಗುರುಪೂರ್ಣಿಮಾ ಪ್ರಯುಕ್ತ ಅಮ್ಟೂರಿನಲ್ಲಿ ಗುರುವಂದನಾ ಕಾರ್ಯಕ್ರಮ..

ಬಂಟ್ವಾಳ : ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಆಮ್ಟೂರು ಇವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಣವನ್ನು ಮಾಡಲು ಪ್ರೇರಣೆ ಕೊಟ್ಟಂತಹ ಗುರುಗಳಾದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯರಾದ...

ಗುರುಪೂರ್ಣಿಮಾ ಪ್ರಯುಕ್ತ ಪ್ರಸೂತಿ ತಜ್ಞೆ ವೆಂಕಮ್ಮರಿಗೆ ಬಿಜೆಪಿ ವತಿಯಿಂದ ಗೌರವರ್ಪಣೆ..

ಬಂಟ್ವಾಳ : ತಾಲೂಕಿನ ಕೊಡಂಬೆಟ್ಟು ಪರಿಸರದಲ್ಲಿ ನೂರಾರು ಮಂದಿಗಳ ಬಾಳಿನಲ್ಲಿ ಬೆಳಕು ಪ್ರಜ್ವಲಿಸಿದ ಪ್ರಸೂತಿ ತಜ್ಞೆ ವೆಂಕಮ್ಮ ಎಂಬವರಿಗೆ ಗುರು ಪೂರ್ಣಿಮಾ ದಿನಾಚರಣೆಯ ಪ್ರಯುಕ್ತ. ಬಿಜೆಪಿ ವತಿಯಿಂದ ಪಕ್ಷದ ನಾಯಕಿ ಸುಲೋಚನ ಜಿ....

ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ, ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಸಾಮೂಹಿಕ ವಿವಾಹ..

ಬಂಟ್ವಾಳ : ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ (ಅಬುದಾಬಿ), ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಜುಲೈ 13 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿರುವ ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ...