ಬಂಟ್ವಾಳ: ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯವಹಾರ ಮಾಡುತ್ತಿದ್ದ ಬಂಟ್ವಾಳ ನಗರಪೋಲೀಸ್ ಠಾಣಾ ವ್ಯಾಪ್ತಿಯ ಮೆಡಿಕಲ್ ಶಾಪ್ ಸಹಿತ 4 ಅಂಗಡಿಗಳಿಗೆ ನೋಟೀಸ್ ಜಾರಿ ಮಾಡಿದ ಬಂಟ್ವಾಳ ಎಸ್.ಐ.ಅವಿನಾಶ್ ಹೆಚ್ ಗೌಡ.
ಕೇಂದ್ರ ಹೊಸ ನೀತಿಯ ಅನ್ವಯ ದಂತೆ ಪೋಲೀಸರು ಹೆಚ್ಚಿನ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು , ಸರಕಾರದ ನಿಯಮ ಪಾಲಿಸದೆ ಗುಂಪು ಸೇರಿಸಿ ವ್ಯಾಪಾರ ಮಾಡುತ್ತಿದ್ದ ಎರಡು ಮೆಡಿಕಲ್ ಶಾಪ್, ಒಂದು ದಿನಸಿ ಅಂಗಡಿ ಹಾಗೂ ಒಂದು ತರಕಾರಿ ಅಂಗಡಿಗಳಿಗೆ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ನೋಟೀಸ್ ಜಾರಿ ಮಾಡಿದ್ದಾರೆ.
ಪ್ರತಿ ಅಂಗಡಿಯವರು ವ್ಯಾಪಾರ ನಡೆಸುವ ವೇಳೆ ಸರಕಾರದ ಅದೇಶವನ್ನು ಪಾಲಿಸಿಕೊಂಡು , ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವರು ಮನವಿ ಮಾಡಿದ್ದಾರೆ.
ಅಂಗಡಿ ಬಾಗಿಲಿನಲ್ಲಿ ಬ್ಯಾಂಕ್ ಗಳಲ್ಲಿ ಗುಂಪು ಸೇರಿದರೆ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಟ್ಲದಲ್ಲಿಯೂ ಎರಡು ತರಕಾರಿ ಅಂಗಡಿಗಳಿಗೆ ವಿಟ್ಲ ಎಸ್.ಐ.ವಿನೋದ್ ರೆಡ್ಡಿ ನೋಟೀಸ್ ನೀಡಿದ್ದರು.ಅದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಇವತ್ತು ಅಂಗಡಿಯನ್ನು ಪೋಲೀಸರು ಬಂದ್ ಮಾಡಿಸಿದ್ದಾರೆ














