Thursday, June 26, 2025

ನೆನಪುಗಳ ಜೊತೆಗೊಂದಷ್ಟು ಕ್ಷಣಗಳು….

ನಿನ್ಗೊತ್ತಾ, ಬಹುಷಃ ನಿನ್ನಿಂದ ನನಗೊದಗಿದ ಸಂಭ್ರಮ, ನೋವಿನ ಕ್ಷಣಗಳು ನನ್ ಬದುಕಲ್ಲಿ ಮತ್ತೆ ಬರಲಾರದು, ಬರಬಾರದು ಕೂಡ. 2019ರ ಅಂತ್ಯದಲ್ಲಿರುವಾಗ ಎಲ್ಲರ ಹಾಗೆ ನಾನೂ ಬಯಸಿದೆ, ವರ್ಷಪೂರ್ತಿ ಖುಷಿಯಾಗಿರ್ಬೇಕು ಅಂತ. ಆದ್ರೆ ಒಂದೆರಡು ತಿಂಗಳು ಕಳೆದು ಮಾರ್ಚ್ ತಿಂಗಳು ಬರುವಷ್ಟರಲ್ಲಿ ಎಲ್ಲಾ ಅಸ್ತವ್ಯಸ್ತವಾಗಿತ್ತು. ಕೊರೋನಾ ಭಯ ಉಸಿರುಗಟ್ಟಿಸಿ ಮನೆಯೊಳಗೇ ನನ್ನ ಬಂಧಿಯಾಗುವಂತೆ ಮಾಡಿತು. ಎಲ್ಲೆಲ್ಲೂ ಸಾವಿನ ಆಕ್ರಂದನಗಳು ಮುಗಿಲು ಮುಟ್ಟಿದಾಗ ಛೇ, ಒಬ್ಬೊಬ್ಬರೇ ಹೀಗೆ ಸಾಯುವ ಬದಲು ಇಡೀ ಜಗತ್ತೇ ಅಂತ್ಯ ಕಂಡರೆ ಚೆನ್ನಾಗಿತ್ತು ಅನ್ಸಿದ್ರಲ್ಲಿ ತಪ್ಪೇನು ಹೇಳು? ನನ್ನಾತ್ಮೀಯರನ್ನೇ ನಾನು ಅನುಮಾನ ಸಂದೇಹದಿಂದ ನೋಡಿ ದೂರವಿಡಬೇಕಾದ ಪರಿಸ್ಥಿತಿ ಬಂದಾಗ ಬದುಕಿ ಸತ್ತಿದ್ದೆ ನಾನು.
ಹೀಗೊಂದು ಭಯಾನಕವಾದ, ಹೀನಾಯವಾದ ಕ್ಷಣಗಳು ಬದುಕಲ್ಲಿ ಬರುತ್ತೆ ಎಂಬ ಕಲ್ಪನೆಯೂ ಇಲ್ಲದೆ ಹಾಯಾಗಿದ್ದವಳನ್ನು ಕೊರೋನಾ ಒಂಟಿಯಾಗಿಸಿದ್ದು ಸುಳ್ಳಲ್ಲ. ಅದೇ ಮನೆ, ಅದೇ ನಾಲ್ಕು ಕೊಠಡಿಗಳು , ಜೀವವಿಲ್ಲದ ವಸ್ತುಗಳ ಜೊತೆ ನನ್ನ ನಿತ್ಯ ಸಂಭಾಷಣೆ. ಒಳಗಿನ ತಳಮಳ ಬಹುಷಃ ಆ ನಿರ್ಜೀವ ವಸ್ತುಗಳಿಗೂ ಅರ್ಥವಾಗಿರಬಹುದು. ಜೀವ ಉಳಿಸಿಕೊಳ್ಳಲು ಕ್ಷಣ ಕ್ಷಣವೂ ಆತಂಕದಿಂದ ಪರದಾಡಿದ ಆ ಕ್ಷಣಗಳ ನೆನಪು ಮತ್ತೆ ನನಗೆ ಬೇಡವೇ ಬೇಡ. ಎಲ್ಲರೂ ಇದ್ದು ಯಾರೂ ಇಲ್ಲದವರ ಹಾಗೆ ಸಾಲು ಸಾಲು ಹೆಣಗಳ ರಾಶಿ ಕಂಡು ಬಿಕ್ಕಿ ಬಿಕ್ಕಿ ಅತ್ತು ಸುರಿದ ಕಣ್ಣೀರಿಗೆ ಬೆಲೆ ಕಟ್ಟುವವರಾರು ಹೇಳು?
ಬೀದಿ ಬದಿಯ ಜೀವಗಳು ಬೀದಿ ನಾಯಿಗಳ ಹಾಗೇ ಮಸಣದ ಗುಂಡಿ ಸೇರುವಾಗ ದುಃಖದ ಕಟ್ಟೆಯೊಡೆದಿತ್ತು. ಇದೆಲ್ಲಾ ನಿನಗೆ ಹೇಗೆ ಅರ್ಥವಾದೀತು?
ನನ್ ಶಾಲೆಯ ಪುಟ್ಟ ಪುಟ್ಟ ಮಕ್ಕಳ ಜೊತೆ ಜೀವನದ ಖುಷಿಯನ್ನೆಲ್ಲಾ ಕಂಡು ನೆಮ್ಮದಿಯ ತುಂಬು ಜೀವನ ನಡೆಸುವಾಗಲೇ ಶಾಲೆಗೇ ಬೀಗ ಹಾಕುವಂತೆ ಮಾಡಿದ ನಿರ್ದಯಿ ನೀನು. ಇಡೀ ಶಾಲೆಗೆ ಸೂತಕ ಕವಿದ ವಾತಾವರಣ ಕವಿದಾಗ ನನ್ನ ಮನದೊಳಗಾದ ಭಾವ ವಿಪ್ಲವಗಳನ್ನು ನೀ ಅರಿಯಲಾರೆ. ಮಕ್ಕಳ ಕಲರವವಿಲ್ಲದ ಆ ಶೋಚನೀಯ ಕ್ಷಣಗಳ ನೆನಪು ಇಂದಿಗೂ ಕಣ್ತುಂಬುವಂತೆ ಮಾಡುತ್ತಿದೆ.
ಕೈ ಮುಗಿದು ಬೇಡುತ್ತಿರುವೆ, ಕನಸಿನಲ್ಲಿಯೂ ನಿನ್ನ ನೆನಪಿಸಿಕೊಳ್ಳಲಾರೆ. ನೀ ತಂದಿಟ್ಟ ಕಷ್ಟಗಳು ನಿನ್ನೊಂದಿಗೇ ಸುಟ್ಟು ಭಸ್ಮವಾಗಲಿ. ಮರಳಿ ಮತ್ತೆಂದೂ ಬರುವ ಯತ್ನ ಮಾಡ್ಬೇಡ. ಚಿಗುರುವ ಕನಸುಗಳನ್ನು ಚಿವುಟಬೇಡ. ಇನ್ನಾದರೂ ನನ್ ದೇಶದ ಜನತೆ ಚೆನ್ನಾಗಿರಲಿ ಎಂಬ ಆಸೆಗೆ ಕಲ್ಲು ಹಾಕ್ಬೇಡ.ಗುಡ್ ಬೈ 2020.

 

ಪ್ರಮೀಳಾ ರಾಜ್

More from the blog

Installation Ceremony : ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ..

ಬಂಟ್ವಾಳ : ವಕೀಲರ ಸಂಘ (ರಿ ) ಬಂಟ್ವಾಳ ಇದರ 2025-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜೂ.26 ರಂದು ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ...

ಸತತ 3ನೇ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕೀರ್ತಿ ಆಯ್ಕೆ..

ವಿಟ್ಲ : ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಮನೆ ಶ್ರೀಮತಿ ವನಿತಾ ಲಕ್ಷ್ಮಣ ಗೌಡ ದಂಪತಿಯ ಪುತ್ರಿ ಕೀರ್ತಿ ಇವರು ಸತತ 3ನೇ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಮಾದರಿ ಹಿರಿಯ ಪ್ರಾಥಮಿಕ...

Crop Insurance : ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ..

ಬಂಟ್ವಾಳ : ಕರಾವಳಿಯ ದಕ್ಸಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಾಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ...

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಪ್ರಭಾಕರ ಪ್ರಭು ಆಗ್ರಹ..

ಬಂಟ್ವಾಳ : ರಾಜ್ಯದ ವಸತಿ ಇಲಾಖೆಯ ಅಧಿನದಲ್ಲಿರುವ ರಾಜೀವ ಗಾಂಧಿ ವಸತಿ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕರಾದ ಬಿ. ಆರ್. ಪಾಟೀಲ್ ಯವರು ವಸತಿ ಸಚಿವರಾದ ಜಮೀರ್...