Thursday, February 13, 2025

ಮನಸ್ಸು-3

ಮುಂದುವರಿದುದು…….
ಚತುರ (SMART)ನಾಗಿರದ ಮೊಬೈಲಿಗೆ ಮಾರು ಹೋಗದೆ ಮಾರು ದೂರವೇ ಇರುವ ಪ್ರಯತ್ನ ಒಳಿತಲ್ಲವೇ? ಈ ನಿಟ್ಟಿನಲ್ಲಿ ನಮ್ನ ಮನಸ್ಸನ್ನು ಗಟ್ಟಿಗೊಳಿಸಲೇಬೇಕು. ಮೊಬೈಲು ಮಹಾ ಕೊಲೆಗಾರ. ಅದು ನಮ್ಮ ಸಮಯವನ್ನು ಕೊಲ್ಲುತ್ತದೆ, ಸಂಬಂಧಗಳನ್ನು ಕೊಲ್ಲುತ್ತದೆ, ಆರೋಗ್ಯವನ್ನು ಕೊಲ್ಲುತ್ತದೆ, ಮೌಲ್ಯವನ್ನು ಕೊಲ್ಲುತ್ತದೆ, ನಮ್ಮತನವನ್ನು ಕೊಲ್ಲುತ್ತದೆ, ಗಳಿಕೆಯನ್ನು ಕೊಲ್ಲುತ್ತದೆ, ದುಡಿಮೆಯನ್ನು ಕೊಲ್ಲುತ್ತದೆ ಮೇಲಾಗಿ ನಮ್ಮ ದೃಷ್ಟಿ ಮತ್ತು ದೃಷ್ಟಿಕೋನಗಳೆರಡನ್ನೂ ಕೊಲ್ಲುತ್ತದೆ.
ದೃಶ್ಯ ಮಾಧ್ಯಮಗಳಲ್ಲಿ ಒಂದಾದ ದೂರದರ್ಶನವು ನಮ್ಮ ಮನಸ್ಸನ್ನು ಬಾಗಿಸುವ ಇನ್ನೊಂದು ವಿದ್ಯುನ್ಮಾನ ಉಪಕರಣ. ಮನೆಗೆ ಯಾರೇ ಬಂದರೂ ’ಕ್ಯಾರೇ’ ಮಾಡದೆ ಆ ಕಡೆಗೆ ಕತ್ತನ್ನು ಕೂಡಾ ಹೊರಳಿಸದೆ ದೂರದರ್ಶನ ವೀಕ್ಷಣೆಯಲ್ಲಿಯೇ ಮಗ್ನರಾಗುವವರು ನಾವು. ಕೆಲವರು ತಮ್ಮ ಕಣ್ಣುಗಳು ಒಮ್ಮೆ ಮೊಬೈಲ್, ಇನ್ನೊಮ್ಮೆ ಟಿ.ವಿ. ಎರಡೆರಡನ್ನೂ ಏಕಕಾಲಕ್ಕೆ ನೋಡಲನುಕೂಲವಾಗವಂತೆ ಕ್ರಮ ಯೋಜನೆಗೊಳಪಡಿಸಿರುವದೂ ಇದೆ. ಕೈಯಲ್ಲಿ ಮೊಬೈಲ್‌ನೊಂದಿಗೆ ಚಿನ್ನಾಟವಾಡುತ್ತಾ ಟಿ.ವಿ ನೋಡುವುದು ಕೆಲವರಿಗೆ ಬಹಳ ಸಲೀಸಾದ ಮೋಜಾಗಿದೆ.
ನಮ್ಮ ಮನಸ್ಸು ಟಿ.ವಿ.ಯ ಕಡೆಗೆ ವಾಲುತ್ತಿರುವುದರಿಂದ ಮನೆ ಮನೆಗಳಲ್ಲಿ ಜಗಳಗಳಾಗುತ್ತಿವೆ. ಅಡುಗೆ ಕರಟಿಹೋಗಿದೆ, ಸರಿಯಾಗಿ ಬೆಂದಿಲ್ಲ, ತಣಿದುದುದೇ ಬಡಿಸಿದ್ದು ಏಕೆ? ಬೇರೆ ತಿಂಡಿ ಮಾಡಬಹುದಿತ್ತಲ್ಲ? ನಾನು ಊಟಕ್ಕಾಗಿ ಕಾಯಬೇಕಾ? ಈ ರೀತಿಯ ಕ್ಷುಲ್ಲಕ ವಿಷಯಗಳನ್ನಾಧರಿಸಿ ಆಗುತ್ತಿರುವ ಜಗಳಗಳಿಗೆ ಮನಸ್ಸುಗಳು ಟಿ.ವಿ ಕಾರ್ಯಕ್ರಮಗಳಿಗೆ ಬಗ್ಗಿಕೊಂಡಿರುವುದೇ ಆಗಿದೆ. ದೋಸೆ ಹೊಯ್ದು ಅದು ಬೇಯುವ ತನಕ ಟಿ.ವಿ ನೋಡಿಬಿಡುತ್ತೇನೆ ಎಂದು ಹೊರ ಬಂದರೆ, ಕಾರ್ಯಕ್ರಮದೆಡೆಯಲ್ಲಿ ದೋಸೆ ಬೆಂದು ಸೀದರೆ? ಒಗ್ಗರಣೆ ಕರಟಿ ಹೋದರೆ? ಸುಲಭ ತಿಂಡಿಯಾಗಿ ಯಾವಾಗಲೂ ಅವಲಕ್ಕಿ, ಬ್ರೆಡ್ಡು, ರಸ್ಕ್, ಬಿಸ್ಕಿಟ್‌ಗಳೇ ಆದರೆ? ಜಗಳಗಳಾಗದಿರುತ್ತವೆಯೇ? ಆಹಾರವನ್ನು ಆನಂದ ಪುಳಕಿತರಾಗಿ ನೆಮ್ಮದಿಯಿಂದ ಸೇವಿಸಿದರೆ ಆರೋಗ್ಯ. ಆದರೆ ಟಿ.ವಿ ವೀಕ್ಷಣೆಯಿಂದ ಆನಂದ ನೆಮ್ಮದಿಗಳು ನಶಿಸಿದರೆ? ಮನಸ್ಸನ್ನು ಟಿ.ವಿ.ಯ ಸೆಳೆತದಿಂದ ಮುಕ್ತಗೊಳಿಸುವುದೇ ಸೂಕ್ತ ಪರಿಹಾರವಾಗದೇ?
ಪಾಕ ತಯಾರಕರು ಮಾತ್ರ ಮನಸ್ಸನ್ನು ದೂರದರ್ಶನದ ಹಿಡಿತದಿಂದ ಸಡಿಲಗೊಳಿಸಿದರಷ್ಟೇ ಸಾಲದು. ಆಹಾರ ಸೇವನೆ ಮತ್ತು ಟಿ.ವಿ ವೀಕ್ಷಣೆಗಳೂ ಏಕಕಾಲಕ್ಕೆ ನಡೆಯುತ್ತಿರಬಾರದು. ತಿನ್ನುವ ಆಹಾರ ಬಾಯಿಯೊಳಗೆ ಮೆಲ್ಲಲ್ಪಟ್ಟು ಜೊಲ್ಲು ರಸದೊಂದಿಗೆ ಮಿಳಿತಗೊಂಡು ನುಂಗಲ್ಪಟ್ಟರೆ ಜೀರ್ಣಕ್ರಿಯೆ ಸಲೀಸು. ಆಹಾರವನ್ನು ಬಡಿಸುತ್ತಿದ್ದಂತೆ ಮತ್ತು ತಿನ್ನುತ್ತಿರುವಂತೆ ಕಣ್ಣು ಮತ್ತು ಮನಸ್ಸು ಬಟ್ಟಲಿನೆಡೆಗಿರದೆ ಟಿ.ವಿ.ಯತ್ತವೇ ಇದ್ದರೆ ಎಲ್ಲಿ ಮೆಲ್ಲು, ಎಲ್ಲಿ ಜೊಲ್ಲು ಅಲ್ಲವೇ? ಬಿಲವನ್ನು ತುಂಬಿದಂತೆ ಬಾಯೊಳಕ್ಕೆ ತಳ್ಳಲ್ಪಡುವ ಆಹಾರ ನಮ್ಮ ದೇಹದ ಅನಾರೋಗ್ಯಕ್ಕೆ ಹೇತುವಾದಿತೇ ಹೊರತು ಶಕ್ತಿದಾಯಕವಾಗದು.
ಮೊಬೈಲು ಹೇಗೆ ಮಹಾಕೊಲೆಗಾರನೋ ಅದೇ ರೀತಿಯಲ್ಲಿ ಟಿ.ವಿ.ಯೂ ಮಹಾಕೊಲೆಪಾತಕಿಯೇ ಸರಿ. ಬದುಕನ್ನು ಡೋಲಾಯಮಾನಗೊಳಿಸುವ ಆಥವಾ ವಿನಾಶಗೊಳಿಸುವ ಎಲ್ಲ ಶಕ್ತಿಯೂ ದೂರದರ್ಶನಕ್ಕಿದೆ. ಆದುದರಿಂದ ರುಚಿಕರವಾದರೂ ವಿಷಸ್ವರೂಪವಾದ ದೂರದರ್ಶನದಿಂದ ನಮ್ಮ ಮನಸ್ಸನ್ನು ನಿಯಂತ್ರಿಸುವುದು ಅತೀ ಅಗತ್ಯ.
…ಮುಂದುವರಿಯುತ್ತದೆ.
ಲೇ: ರಮೇಶ ಎಂ ಬಾಯಾರು, ಎಂ. ಎ, ಬಿ.ಎಡ್


ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ನಂದನ ಕೇಪು
ಮತ್ತು ಆಡಳಿತಾಧಿಕಾರಿ ಜನತಾ ಎಜುಕೇಷನಲ್ ಸೊಸೈಟಿ (ರಿ) ಅಡ್ಯನಡ್ಕ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...