Thursday, February 5, 2026

ಆಟಿ ಕಳೆಂಜ

ಬರಹ: ಹೆಚ್ಕೆ ನಯನಾಡು

ಬದುಕಿಗೆ ಸ್ಪೂರ್ತಿ ನೀಡುವ ಆಟಿ ಕಳೆಂಜೆ
ಕಳೆಂಜೆ ಕಳೆಂಜೆನೋ!
ಕಳೆಂಜೆ ಬತ್ತೇನೊ!
ಮಾರಿ ಗಿಡತ್ತೇನೋ!
ಆಟಿದ ಮಾರಿ ಗಿಡತ್ತೇನೊ!
ಓ ಆಟಿ ಕಳೆಂಜಾ..‌ ಬಾ ಊರಿನ ಮಾರಿ ಕಳೆಯಲು ಬಾ ಎಂದು ತುಳುನಾಡಿನಲ್ಲಿ ಆಟಿ ಕಳೆಂಜನಿಗೆ ವಿಶಿಷ್ಟ ಸ್ಥಾನ ನೀಡುತ್ತಿದ್ದ ತುಳು-ಕನ್ನಡದ ಜನತೆ ಇಂದು ಕೊರೊನಾದಂತಹ ಮಹಾಮ್ಮಾರಿಯನ್ನು ಆಟಿ ಕಳೆಂಜ ಓಡಿಸಲಿಲ್ಲ ಎನ್ನುವ ಬೇಸರದಲ್ಲಿರಬಹುದು ಸರಿ. ಆದರೆ ಸಂಪ್ರದಾಯದ ಆಟಿ ತಿಂಗಳಿನ ದಿನಗಳಲ್ಲಿ ತುಳುನಾಡಿನ ಮನೆಯಂಗಳದಲ್ಲಿ ಹೆಜ್ಜೆ ಹಾಕಿ ನಲಿಯುತ್ತಿದ್ದ ಆಟಿ ಕಳೆಂಜ ಈಗೆಲ್ಲಿ?
ಇಲ್ಲ ಊರಿನ ಅಂಗಳದಲ್ಲಿ ತೆಂಬರೆಯ ಶಬ್ದಕ್ಕೆ, ತೆಂಗಿನ ಗರಿಯ ಕೊಡೆ ಹಿಡಿದು, ದೈವ ಪ್ರೀತಿ ಭಕ್ತಿ ಆಧರಣೆಯಲ್ಲಿ ವಸ್ತ್ರವ ಧರಿಸಿ ಮನೆ ಮನೆ ತಿರುಗುವ ಆಟಿ ಕಳೆಂಜ ಎಲ್ಲರಿಗೂ ಪ್ರೀತಿದಾಯಕ.ಕಿರಿಯರಿಗೆ ಆತ್ಮೀಯತೆ, ಹಿರಿಯರಿಗೆ ನಂಬಿಕೆ.
ತುಳುನಾಡಿನಲ್ಲಿ ಆಟಿ(ಆಷಾಡ) ಮೇಲಿನ ಕರ್ನಾಟಕದಲ್ಲಿ ಶ್ರಾವಣವಾದರೂ ನಮ್ಮೂರಿಗೆ ಆಟಿ, ಆಟಿ ಕಳೆಂಜ,
ಕಳೆಂಜ ಎಂದರೆ ಕಳೆಯುವವನು ಎಂದರ್ಥ, ಊರಿಗೆ ಬಂದ ಮಹಾಮ್ಮಾರಿಯನ್ನು , ಮಾನವ, ಸಾಕುಪ್ರಾಣಿ, ಬೆಳೆ-ಸೆಳೆಯ ಕೀಟ ರೋಗ ಬಾಧೆಯನ್ನು ಕಳೆಯಲು ವರ್ಷಕ್ಕೊಮ್ಮೆ ಬರುವ ಮಾಂತ್ರಿಕ ರೂಪದ ನಮ್ಮ ನಂಬಿಕೆಯ ಆಟಿ ಕಳೆಂಜ .

ಆಟಿ ಕಳೆಂಜನ ರೂಪವೇ ಮಾಂತ್ರಿಕ, ಮಾಟ ಕಳೆಯುವ ಸೂತ್ರಕ, ದುಷ್ಟ ಶಕ್ತಿಯನ್ನು ಹೋಗಲಾಡಿಸಲು ಒಂದು ಆಶಯದೊಂದಿಗೆ , ಬದುಕಿಗೆ ಹೊಸ ಧೈರ್ಯ, ಚೈತನ್ಯ ನೀಡುವುದರೊಂದಿಗೆ, ಆರೋಗ್ಯ ಭಾಗ್ಯ ಮತ್ತು ಪ್ರೀತಿ ನೀಡುವ ಶಕ್ತಿಯೇ ಆಟಿ ಕಳೆಂಜ.
ಈ ಸಾಂಪ್ರದಾಯಿಕ ನ್ರತ್ಯವನ್ನು ಒಂದು ನಿರ್ದಿಷ್ಟ ಜನಾಂಗದ ಬಂಧುಗಳು ಮಾಡುತ್ತಾರೆ. ಹಾಗಂತ ಇಂದು ಅವರ ಬಳಕೆ ಕಮ್ಮಿಯಾಗಿದೆ,
ಹಿಂದಿನ ಮಾದರಿಯ ಆಟಿ ಕಳೆಂಜ ಹೇಗಿದ್ದ? ಎಳೆಯ ಹುಡುಗನಿಗೆ ತೆಂಗಿನ ಎಳೆಯ ಗರಿಗಳ ಹೆಣೆದು ಉಡುಗೆ ಧರಿಸಿ, ಕಾಲ್ಗೆಜ್ಜೆ ಹಾಕಿ, ಕಡು ಕೆಂಪು ಬಣ್ಣದ ಬಟ್ಟೆ, ಮುಟ್ಟಾಳೆ ಟೋಪಿಯಾಕಿಸಿ, ಮುಖಕ್ಕೆ ಕಪ್ಪು-ಬಿಳಿ ಬಣ್ಣ ಬಳಿದು ಮಡಲ ಕೊಡೆ ಹಿಡಿದು ತಿರುಗಿಸುತ್ತಾ, ಹೂವಿನ ಎಲೆಗಳ ಅಲಂಕಾರದಿಂದ ತನ್ನ ಪೋಷಕರ ಜತೆ ಪಾಡ್ದನ ತೆಂಬರೆ ಬಾರಿಸುತ್ತಾ ಕಳೆಂಜನ ಕತೆ ಸಾರುತ್ತಾ, ಮನೆ ಮನೆ ಸಾಗುತ್ತಾನೆ.
ಮನೆಯಜಮಾನ (ಯಜಮಾನ್ತಿ) ತಡ್ಪೆಯಲ್ಲಿ (ಗೆರಸೆ)ನೀಡುವ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ,ಫಲವಸ್ತು, ಪಡೆದು ನಿಮ್ಮ ಮನೆಯ ಮಾರಿಯನ್ನು ಪಡೆದು ಕೊಂಡು ಹೋದೆ ಎನ್ನುತ್ತಾ ಮನೆಯಂಗಳದಿಂದ ಹೊರಡುತ್ತಾನೆ ಕಳೆಂಜ.

ಕಳೆಂಜ ದೈವವೋ ಗೊತ್ತಿಲ್ಲ!
ಅವನಿಗೆ ಗುಡಿಯಿಲ್ಲಾ, ಗೋಪುರವಿಲ್ಲಾ, ಆಟಿ ತಿಂಗಳ ಹೊರತು ಅವನನ್ನು ಆರಾಧಿಸುವವರೂ ಇಲ್ಲ. ಈತ ನಂಬಿಕೆಯ ಪ್ರತೀಕ, ಬಡತನ ರೋಗಿಗಳ ರುಜಿನಗಳಿಗೆ, ದುರ್ಬಲರಿಗೆ, ಊರ ಸಮ್ರದ್ದಿಗೆ ಕಳೆಂಜನೇ ಸಾಮ್ರಾಜ್ಯ. ಮಾರಿಯನ್ನು ಹೋಗಲಾಡಿಸಲು ಕಳೆಂಜನೆ ರಾಯಭಾರಿ ಆದರೆ ಆಟಿಯೇ ಅವನನ್ನು ಕಾಯುವುದು, ನಮ್ಮ ಶ್ರದ್ದಾ ನಂಬಿಕೆಗೆ ಅವನು ರಾಯಭಾರಿ.
ಹೌದು ಮಾರಿಯನ್ನು ಹೋಗಲಾಡಿಸುತ್ತೇನೆ ಎಂದು ಅವ ಪಡೆದ ಅಕ್ಕಿ ಫಸಲು ಹಿಂದಿನ ಕಾಲದಲ್ಲಿ ಶೇಖರಿಸಿ ಒಂದು ಕಡೆಯಲ್ಲಿ ಬೇಯಿಸಿ, ಸಂಸಾರ ಸೇರಿಗೆ ಸೇವಿಸಿ ಎಲ್ಲರಿಗೂ ಒಳಿತಾಗಲಿ ಎಂದು ಆಶೀಸುತ್ತಿದ್ದರಂತೆ, ಆದರೆ ಇಂದು ಅಂತಹ ಸನ್ನಿವೇಶ ನೋಡಲು ಆಗುವುದಿಲ್ಲ, ಕಳೆಂಜನ ವೇಷವನ್ನು ನೋಡಲು ಆಗುತ್ತಿಲ್ಲಾ, ಕಳೆಂಜನೇ ಮಾಸ್ಕ್ ಹಾಕಿ ಬರುವ ಕಾಲ ಇಂದಿನದಾಗಿದೆ. ಸಂಪ್ರದಾಯವೆಲ್ಲಾ ನಮ್ಮಿಂದಾ ದೂರವಾಯಿತೇ..?

More from the blog

ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಗೆ ಹನೀಫ್ ಬಗ್ಗುಮೂಲೆ ಹಾಗೂ ಸಿದ್ದೀಕ್ ಸೂರ್ಯ ನೇಮಕ

ಬಂಟ್ವಾಳ : ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಳಕೆಮಜಲು ಸಮೀಪದ ಬಗ್ಗುಮೂಲೆ ನಿವಾಸಿ ಹನೀಫ್ ಬಗ್ಗುಮೂಲೆ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಯುವ ಸಂಘಟಕ, ಯುವ ಉದ್ಯಮಿ,...

ಪಾಕಿಸ್ತಾನಕ್ಕೆ ಹೋಲಿಸಿದಾಗ ಸಿಟ್ಟುಗೊಳ್ಳುವ ನೀವು, ನಮ್ಮ ಸೈನಿಕರ ಮೇಲೆ ಪಾಕ್ ಪ್ರೇರಿತ ಉಗ್ರರಿಂದ ದಾಳಿಯಾದಾಗ ಖಂಡಿಸುವುದಿಲ್ಲ ಏಕೆ?

ಬೆಂಗಳೂರು: "ಶಾಸಕ ಸಿ.ಟಿ. ರವಿ ಅವರು ಕಾಂಗ್ರೆಸ್ ಸದಸ್ಯರ ಹೇಳಿಕೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದಾಗ ನಿಮಗೆ ತೀವ್ರ ಕೋಪ ಬರುತ್ತದೆ. ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಎಂಬ ಅರಿವು ನಿಮಗಿದ್ದರೆ, ಪುಲ್ವಾಮಾ ಮತ್ತು ಪಹಲ್ಗಾಮ್‌ಗಳಲ್ಲಿ...

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಕುದ್ರೆಬೆಟ್ಟು : ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ – ನಾಲ್ವರಿಗೆ ಗಾಯ

ಬಂಟ್ವಾಳ: ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಮೇಲತ್ಸುವೆಯ ಕೊನೆಯ ಭಾಗದಲ್ಲಿ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಅಳಕೆಮಜಿಲು ನಿವಾಸಿ ಅವ್ವಮ್ಮ ಹಾಗೂ ಸುಹೈಲ್ ರಿಕ್ಷಾ...