Friday, June 27, 2025

ಏನೆಂದು ಬರೆಯಲಿ…

ಏನೆಂದು ಬರೆಯಲಿ ಕವನ
ಯಾರ ಬಗ್ಗೆ ಬರೆಯಲಿ ಕವನ
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಕವನ ಬರೆಯಲು ಕುಳಿತರೆ
ಒಮ್ಮೆ ಎಲ್ಲ ನಮ್ಮವರಂತೆ ಕಾಣುವರು ಕೆಲವೊಮ್ಮೆ ನಮ್ಮವರೇ ಬೇರೆಯವರಂತೆ ಕಾಣುವರು ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಗುರುಗಳ ಬಗ್ಗೆ ಬರೆದೆನೊಂದು ಕವನ ಗುರುವೇ ದೇವರೆಂದು ಬರೆದೆನೊಂದು ಕವನ.
ಗುರುಗಳೇ ಮಕ್ಕಳ ಭವಿಷ್ಯದಲ್ಲಿ ಆಟ ಆಡಿದಾಗ ನನ್ನ ಕವನ ಅರ್ಥಹೀನವಾಯಿತು. ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಅಣ್ಣ ತಮ್ಮಂದಿರ ಬಗ್ಗೆ ಬರೆದೇ ನೊಂದು ಕವನ, ರಾಮ ಲಕ್ಷ್ಮಣ ರಂತೆ ಇರುವರೆಂದು ಬರೆದೆನೊಂದು ಕವನ, ಅಣ್ಣ ತಮ್ಮಂದಿರು ಆಸ್ತಿಯ ವಿಷಯಕ್ಕೆ ಬಡಿದಾಡಿದಾಗ ನನ್ನ ಕವನ ಅರ್ಥಹೀನ ವಾಯಿತು.
ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ? ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ನನ್ನ ಹಿತೈಷಿಗಳೆಂದು ಬರಿದೇನೊಂದುಕವನ, ಯಾವಾಗಲೂ ನನ್ನ ಜೊತೆಗಿರುವರೆಂದು ಬರೆದೆ ನೊಂದು ಕವನ ನನ್ನ ಕವನ ಮುಗಿಯುವಷ್ಟರಲ್ಲಿ ಅವರು ನನ್ನ ಹಿತ ಶತ್ರುಗಳೆಂದು ತಿಳಿಯಿತು, ನನ್ನ ಕವನ ಅರ್ಥಹೀನ ವಾಯಿತು.
ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲ್ಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಪ್ರಾಣಿ ಪಕ್ಷಿಗಳ ಬಗ್ಗೆ ಬರೆದೆನೊಂದು ಕವನ, ಜಗತ್ತಿನಲ್ಲಿ ಇವುಗಳೇ ಮುಗ್ಧವೆಂದು ಬರೆದೆನೊಂದು ಕವನ, ಆದರೆ ಕೆಲವು ಕ್ರೂರ ಪ್ರಾಣಿ ಪಕ್ಷಿಗಳನ್ನು ನೋಡಿದೆ, ನನ್ನ ಕವನ ಅರ್ಥಹೀನಾವಾಯಿತು, ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಪ್ರಕೃತಿಯೇ ತಾಯಿಯೆಂದು ಬರೆದೆನೊಂದು ಕವನ ಎಲ್ಲರನ್ನು ಎಲ್ಲವನ್ನು ಸಲಹುತ್ತಿರುವವಳೆಂದು ಬರೆದೆನೊಂದು ಕವನ ಪ್ರಕೃತಿಯ ವಿಕೋಪ ವನ್ನೊಮ್ಮೆ ಕಂಡೆ ನನ್ನ ಕವನ ಅರ್ಥ ಹೀನವಾಯಿತು. ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಗಂಡ ಹೆಂಡಿರ ಪ್ರೀತಿ ಪ್ರೇಮದ ಬಗ್ಗೆ ಬರೆದನೆಂದು ಕವನ ಸಂಸಾರದ ರಥದಲ್ಲಿ ಯಾವಾಗಲೂ ಜೊತೆಯಾಗಿರುವರೆಂದು ಬರೆದನೆಂದು ಕವನ.
ಹೆಂಡತಿ ಗಂಡನನ್ನು ಕೊಂದ ವಿಷಯ ತಿಳಿದು. ನನ್ನ ಕವನ ಅರ್ಥಹೀನಾವಾಯಿತು, ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಅಪ್ಪ ಅಮ್ಮನ ಬಗ್ಗೆ ಬರೆಯದೆನೊಂದು ಕವನ ಮಕ್ಕಳ ಸೃಷ್ಟಿಯ ಎರಡು ಅದ್ಭುತ ಮುಖಗಳೆಂದು ಬರೆದೆನೊಂದು ಕವನ
ಮಕ್ಕಳು ದೊಡ್ಡವರಾದರು ತಮ್ಮ ಸೃಷ್ಟಿಯ ಎರಡು ಅದ್ಭುತಗಳನ್ನು ಮರೆತುಬಿಟ್ಟರು. ನನ್ನ ಕವನ ಅರ್ಥಹೀನಾವಾಯಿತು, ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

 

ಗಿರೀಶ್ ತುಳಸೀವನ 

 

More from the blog

ಪಂತಡ್ಕ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ..

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಇದರ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ...

Bantwal : ಬಂಟ್ವಾಳ ಪುರಸಭೆಯ ವಿಶೇಷ ಸಭೆ : ಪೌರಕಾರ್ಮಿಕರ ವೇತನ ಕುರಿತು ಚರ್ಚೆ..

ಬಂಟ್ವಾಳ : ಪೌರಕಾರ್ಮಿಕರ ವೇತನ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭಾ ವಿಶೇಷ ಸಭೆ ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಿತು. ಪುರಸಭೆಯ ಪೌರಕಾರ್ಮಿಕರ ವಿಶೇಷ ನೇಮಕಾತಿ ಹಾಗೂ...

ಇಂದಿನಿಂದ ಮುಹರ್ರಮ್ ತಿಂಗಳು ಪ್ರಾರಂಭ : ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಘೋಷಣೆ..

ಮಾಣಿ: ಗುರುವಾರ ರಾತ್ರಿ ಚಂದ್ರದರ್ಶನವಾದ ಮಾಹಿತಿ ಪ್ರಬಲವಾಗಿರುವುದರಿಂದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಹಾಗೂ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರ ಬಳಿ ಖಚಿತವಾದ ಕಾರಣ ಇಂದಿನಿಂದ ಮುಹರ್ರಮ್ ಪ್ರಾರಂಭ ಎಂದು ಖಾಝಿ...

Kempegowda Jayanti : ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ..

ಬಂಟ್ವಾಳ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಹಶಿಲ್ದಾರ್ ಅರ್ಚನಾ ಭಟ್ ಮಾತನಾಡಿ, ದೂರದೃಷ್ಟಿಯ ಚಿಂತನೆಯ ವ್ಯಕ್ತಿಯಾಗಿದ್ದ...