Wednesday, February 12, 2025

ಏನೆಂದು ಬರೆಯಲಿ…

ಏನೆಂದು ಬರೆಯಲಿ ಕವನ
ಯಾರ ಬಗ್ಗೆ ಬರೆಯಲಿ ಕವನ
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಕವನ ಬರೆಯಲು ಕುಳಿತರೆ
ಒಮ್ಮೆ ಎಲ್ಲ ನಮ್ಮವರಂತೆ ಕಾಣುವರು ಕೆಲವೊಮ್ಮೆ ನಮ್ಮವರೇ ಬೇರೆಯವರಂತೆ ಕಾಣುವರು ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಗುರುಗಳ ಬಗ್ಗೆ ಬರೆದೆನೊಂದು ಕವನ ಗುರುವೇ ದೇವರೆಂದು ಬರೆದೆನೊಂದು ಕವನ.
ಗುರುಗಳೇ ಮಕ್ಕಳ ಭವಿಷ್ಯದಲ್ಲಿ ಆಟ ಆಡಿದಾಗ ನನ್ನ ಕವನ ಅರ್ಥಹೀನವಾಯಿತು. ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಅಣ್ಣ ತಮ್ಮಂದಿರ ಬಗ್ಗೆ ಬರೆದೇ ನೊಂದು ಕವನ, ರಾಮ ಲಕ್ಷ್ಮಣ ರಂತೆ ಇರುವರೆಂದು ಬರೆದೆನೊಂದು ಕವನ, ಅಣ್ಣ ತಮ್ಮಂದಿರು ಆಸ್ತಿಯ ವಿಷಯಕ್ಕೆ ಬಡಿದಾಡಿದಾಗ ನನ್ನ ಕವನ ಅರ್ಥಹೀನ ವಾಯಿತು.
ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ? ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ನನ್ನ ಹಿತೈಷಿಗಳೆಂದು ಬರಿದೇನೊಂದುಕವನ, ಯಾವಾಗಲೂ ನನ್ನ ಜೊತೆಗಿರುವರೆಂದು ಬರೆದೆ ನೊಂದು ಕವನ ನನ್ನ ಕವನ ಮುಗಿಯುವಷ್ಟರಲ್ಲಿ ಅವರು ನನ್ನ ಹಿತ ಶತ್ರುಗಳೆಂದು ತಿಳಿಯಿತು, ನನ್ನ ಕವನ ಅರ್ಥಹೀನ ವಾಯಿತು.
ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲ್ಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಪ್ರಾಣಿ ಪಕ್ಷಿಗಳ ಬಗ್ಗೆ ಬರೆದೆನೊಂದು ಕವನ, ಜಗತ್ತಿನಲ್ಲಿ ಇವುಗಳೇ ಮುಗ್ಧವೆಂದು ಬರೆದೆನೊಂದು ಕವನ, ಆದರೆ ಕೆಲವು ಕ್ರೂರ ಪ್ರಾಣಿ ಪಕ್ಷಿಗಳನ್ನು ನೋಡಿದೆ, ನನ್ನ ಕವನ ಅರ್ಥಹೀನಾವಾಯಿತು, ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಪ್ರಕೃತಿಯೇ ತಾಯಿಯೆಂದು ಬರೆದೆನೊಂದು ಕವನ ಎಲ್ಲರನ್ನು ಎಲ್ಲವನ್ನು ಸಲಹುತ್ತಿರುವವಳೆಂದು ಬರೆದೆನೊಂದು ಕವನ ಪ್ರಕೃತಿಯ ವಿಕೋಪ ವನ್ನೊಮ್ಮೆ ಕಂಡೆ ನನ್ನ ಕವನ ಅರ್ಥ ಹೀನವಾಯಿತು. ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಗಂಡ ಹೆಂಡಿರ ಪ್ರೀತಿ ಪ್ರೇಮದ ಬಗ್ಗೆ ಬರೆದನೆಂದು ಕವನ ಸಂಸಾರದ ರಥದಲ್ಲಿ ಯಾವಾಗಲೂ ಜೊತೆಯಾಗಿರುವರೆಂದು ಬರೆದನೆಂದು ಕವನ.
ಹೆಂಡತಿ ಗಂಡನನ್ನು ಕೊಂದ ವಿಷಯ ತಿಳಿದು. ನನ್ನ ಕವನ ಅರ್ಥಹೀನಾವಾಯಿತು, ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಅಪ್ಪ ಅಮ್ಮನ ಬಗ್ಗೆ ಬರೆಯದೆನೊಂದು ಕವನ ಮಕ್ಕಳ ಸೃಷ್ಟಿಯ ಎರಡು ಅದ್ಭುತ ಮುಖಗಳೆಂದು ಬರೆದೆನೊಂದು ಕವನ
ಮಕ್ಕಳು ದೊಡ್ಡವರಾದರು ತಮ್ಮ ಸೃಷ್ಟಿಯ ಎರಡು ಅದ್ಭುತಗಳನ್ನು ಮರೆತುಬಿಟ್ಟರು. ನನ್ನ ಕವನ ಅರ್ಥಹೀನಾವಾಯಿತು, ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

 

ಗಿರೀಶ್ ತುಳಸೀವನ 

 

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...