Thursday, February 5, 2026

ಗುರುವಿನ ಗುರುಗಳಿಗೊಂದು ನಮನ

ಕಲ್ಲಡ್ಕ ಎಂದಾಕ್ಷಣ ಅದೇನೋ ಹೊಸತು ವೈಶಿಷ್ಟ್ಯತೆ ನಮಗೆ ಎದ್ದು ಕಾಣುತ್ತದೆ. ಅಂಥದ್ದೇ ಒಂದು ಕಾರ್ಯಕ್ರಮ ಎಂದರೆ ಅದು ಶ್ರೀರಾಮ ಪದವಿ ವಿಭಾಗದ ಶಿಕ್ಷಕರ ದಿನಾಚರಣೆ.
ಹೌದು ನಾನು ಹೇಳುತ್ತಿರುವುದು ಅದನ್ನೇ ಮೊನ್ನೆ ಸೆಪ್ಟೆಂಬರ್ ಐದು ಶಿಕ್ಷಕರ ದಿನಾಚರಣೆ ಶ್ರೀರಾಮ ಪದವಿ ವಿಭಾಗದಲ್ಲಿ ನಡೆಯಿತು. ಅದು ಕೇವಲ ಅಲ್ಲಿ ಕಲಿಸುವಂಥ ಶಿಕ್ಷಕರು ಮಾತ್ರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರೆ ಅದು ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಸಾಮಾನ್ಯ ಹಾಗೂ ಅದರಲ್ಲಿ ನನಗೇನು ವಿಶೇಷ ಅನ್ನಿಸುತ್ತಿರಲಿಲ್ಲ ಆದರೆ ಇದೊಂದು ಮಕ್ಕಳಿಗೆ ಶಿಕ್ಷಕರ ಮೇಲಿನ ಗೌರವ ಹೆಚ್ಚಿಸುವ ಕಾರ್ಯಕ್ರಮವಾಗಿತ್ತು. ಎಂದು ನನ್ನ ಅನಿಸಿಕೆ.

ಯಾಕೆಂದರೆ ಇಲ್ಲಿ ಶಿಕ್ಷಕ ವೃತ್ತಿ ನಡೆಸುತ್ತಿರುವ ಶಿಕ್ಷಕರ ಗುರುಗಳು ಕೂಡ ತಮ್ಮ ಶಿಷ್ಯರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಎಂದು ಮಾತ್ರ ಹೇಳಿದರೆ ತಪ್ಪಾದೀತು. ಯಾಕೆಂದರೆ ಇಲ್ಲಿಯ ಶಿಕ್ಷಕರು ತಮ್ಮ ಗುರುಗಳನ್ನು ವೇದಿಕೆಗೆ ಕರೆ ತಂದು ಗುರುಗಳ ಪಾದಗಳನ್ನು ತೊಳೆದು ಒರೆಸಿ ಪುಷ್ಪಾರ್ಚನೆಗೈದು ತನ್ನ ಗುರುಗಳ ಕೈಯಿಂದ ತಿಲಕ ಧಾರಣೆ ಮಾಡಿಸಿ. ಗುರುಗಳು ತಮ್ಮ ಶಿಷ್ಯರಿಗೆ ಅಕ್ಷತೆ ಕಾಳುಗಳನ್ನು ತಲೆಗೆ ಹಾಕಿ ಆಶೀರ್ವದಿಸುವುದರ ಮುಖಾಂತರ ಮಕ್ಕಳಿಗೆ ಮಾದರಿ ಶಿಕ್ಷಕರಾದರು. ಇದೊಂದು ಭಾವನಾತ್ಮಕ ಕಾರ್ಯಕ್ರಮ ಅನ್ನುವುದಕ್ಕೆ ಇಲ್ಲಿಯ ಶಿಕ್ಷಕರ ಗುರುಗಳ ಕಣ್ಣಂಚು ಹಾಗೂ ಶಿಕ್ಷಕರ ಕಣ್ಣು ಮತ್ತು ಮುಂದೆ ಕುಳಿತಿದ್ದ ವಿದ್ಯಾರ್ಥಿಗಳ ಕಣ್ಣಂಚುಗಳು ತುಂಬಿ ಹರಿಯುತ್ತಿದ್ದ ಆನಂದಭಾಷ್ಪ ಹೇಳುತ್ತಿತ್ತು ಇದೊಂದು ಕೇವಲ ಶಿಕ್ಷಕರ ದಿನಾಚರಣೆಯಲ್ಲ ಇದೊಂದು ಸಂಬಂಧಗಳ ದಿನಾಚರಣೆ ಇದೊಂದು ಬಾಂಧವ್ಯಗಳ ದಿನಾಚರಣೆ ಇದೆಲ್ಲಕ್ಕಿಂತಲೂ ಹೆಚ್ಚಾಗಿ ಇದೊಂದು ಅರ್ಥಪೂರ್ಣ ದಿನಾಚರಣೆ.
ಶ್ರೀರಾಮ ಪದವಿ ಮಹಾವಿದ್ಯಾಲಯದ ಮಕ್ಕಳಿಗೆ ತನ್ನ ಶಿಕ್ಷಕರ ಶಿಕ್ಷಕರನ್ನು ನೋಡುವ ಸುವರ್ಣ ಅವಕಾಶವನ್ನು ಮಾಡಿಕೊಟ್ಟ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ನನ್ನ ನಮನಗಳು.🙏

 


✍ ಗಿರೀಶ್ ತುಳಸೀವನ

More from the blog

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...