Sunday, January 25, 2026

*ಅವಳಿಗೊಂದು ನಮನ*

ಕಷ್ಟ ಸುಖ ನೋವು ನಲಿವುಗಳನ್ನು ಸಹಿಸಿಕೊಂಡು ಬದುಕಿನುದ್ದಕ್ಕೂ ಬೇರೆಯವರ ಒಳಿತಿಗಾಗಿ ಬದುಕುವವಳು ಹೆಣ್ಣು. ಹುಟ್ಟಿನಿಂದ ತನ್ನವರ ಶ್ರೇಯಸ್ಸಿಗಾಗಿಯೇ ಮಿಡಿಯುವ ಹೃದಯವೊಂದಿದ್ದರೆ ಅದು ಅವಳ ವಿಶಾಲ ಹೃದಯ ಮಾತ್ರ. ಮಗಳಾಗಿ, ತಂಗಿಯಾಗು, ಅಕ್ಕ, ಅಮ್ಮ, ದೊಡಮ್ಮ, ಚಿಕಮ್ಮ, ಪತ್ನಿಯಾಗಿ, ದೇವತೆಯಾಗಿ ಮನೆ ಮನಸ್ಸನ್ನು ಬೆಳಗುವಳು.

ವಿರಾಮವಿಲ್ಲದ ಉದ್ಯೋಗ ಅವಳದು, ಆದರೂ ಸಂಬಳ ಬಯಸದೆ ಪ್ರೀತಿ ಬಯಸಿ ಸಮಯದ ಲೆಕ್ಕಾಚಾರವಿಲ್ಲದೆ ದುಡಿಯವಳು. ತಾನು ಹಸಿವನ್ನು ಸಹಿಸಿ ತನ್ನವರಿಗೆ ರುಚಿ ರುಚಿಯಾದದ್ದನ್ನು ಬಡಿಸುತ್ತಾ ಖುಷಿಪಡುವಳು *ಅವಳೆ ಮಹಿಳೆ* ಅಡುಗೆ ಕೆಲಸ ಮಾತ್ರವಲ್ಲ ಸಮಾಜವನ್ನು ಆಳುವ ಶಕ್ತಿ ನನಗಿದೆ ಎಂದು ತೋರಿಸಿಕೊಟ್ಟವಳು, ತನ್ನ ಸಮಾನತೆಗಾಗಿ ಈಗಲೂ ಹೋರಾಡುತಿರುವವಳು, ಪೈಲಟ್, ಡ್ರೈವರ್, ಮ್ಯಾನೇಜರ್, ಲೀಡರ್, ಹೀಗೆ ಎಲ್ಲಾ ಕ್ಷೇತ್ರದಲ್ಲಿ ತನಿದ್ದರೂ ತನ್ನ ಮಗುವಿಗೆ ತಾಯಿಯಾಗಿ ಮಮತೆಯ ಜೀವವಾಗಿ ಉಳಿಯುವವಳು. ಅಂತಹ ಮಹಿಳೆಗೆ ಪ್ರೀತಿಯ ಸಾಂತ್ವಾನವನ್ನು ನೀಡಿ ಸಂಭ್ರಮದ ಸವಿಯನ್ನು ಉಣಬಡಿಸಿದಾಗ ಸಂತಸದ ಕಡಲಲ್ಲಿ ತೇಲುವಳು.

ನೋವು, ಸಂಕಟ , ದುಃಖಗಳಿದ್ದರೂ ಎಲ್ಲರಿಗೋಸ್ಕರ ಖುಷಿಯಿಂದ ಇರುವ ಎಲ್ಲಾ ಹೆಮ್ಮೆಯ ಮಹಿಳೆಯರಿಗೆ ಒಂದು ಸಲಾಮ್…

ಬರಹ : ಸಮೀಕ್ಷಾ ಶಿರ್ಲಾಲು

More from the blog

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...

ವಿಟ್ಲ ಜಾತ್ರೋತ್ಸವದಲ್ಲಿ ಮನರಂಜಿಸಿದ ವಿಟ್ಲೋತ್ಸವ..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಲಾವಧಿ ಜಾತ್ರೋತ್ಸವದಲ್ಲಿ ಮಂಗಳವಾರ ರಾತ್ರಿ ದೇವರ ಹೂ ತೇರು ಉತ್ಸವ ನಡೆಯಿತು. ವಿಆರ್ ಸಿ ವಿಟ್ಲ ಇದರ ಆಶ್ರಯದಲ್ಲಿ ರಮಾನಾಥ ವಿಟ್ಲ ಸಾರಥ್ಯದಲ್ಲಿ 33...

ಮಾಣಿ : ಸ್ವಚ್ಛ ಗ್ರಾಮ ಅಭಿಯಾನ ಕಾರ್ಯಕ್ರಮ..

ಬಂಟ್ವಾಳ : ಮಾಣಿ ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್, ಮಹಿಳಾ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಣಿಕ್ಯ ಸಂಜೀವಿನಿ ಒಕ್ಕೂಟ ಹಾಗೂ ಸಂಘ ಸಂಸ್ಥೆಗಳ ಜಂಟಿ...