Saturday, February 8, 2025

ಅನಿವಾಸಿ ಕನ್ನಡಿಗರು ಕನ್ನಡನಾಡಿನ ಮಕ್ಕಳಲ್ಲವೇ : ಪ್ರಭಾಕರ್ ಅಂಬಲತೆರೆ

ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಮನವಿ
ಮುಂಬಯಿ (ದುಬಾಯಿ): ಗಲ್ಫ್ ರಾಷ್ಟ್ರಗಳಿಂದ ಕೆಲಸ ಕಳಕೊಂಡು ಹಾಗೂ ಇನ್ನಿತರ ಕಾರಣಗಳಿಂದ ತಾಯ್ನಾಡಿಗೆ ಹಿಂತಿರುಗಿ ಬರುವ ಅನಿವಾಸಿ ಕನ್ನಡಿಗರ ಭವಿಷ್ಯತ್ತಿನ ಜೀವನಕ್ಕೆ ದಾರಿ ಕಾಣಲು ಬೇಕಾದ ಸಹಾಯ ಕರ್ನಾಟಕ ರಾಜ್ಯ ಸರ್ಕಾರ ಮಾಡಬೇಕಾದದ್ದು ಸರಕಾರದ ಕರ್ತವ್ಯ ಮತ್ತು ಜವಾಬ್ದಾರಿಕೆ ಎಂದು ಹೆಸರಾಂತ ಕನ್ನಡಪರ ಸಾಮಾಜಿಕ ಕಾರ್ಯಕರ್ತ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ (ಕರ್ನಾಟಕ ಎನ್‌ಆರ್‌ಐ ಫೋರಂ-ಯುಎಇ) ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅಂಬಲತೆರೆ ಹೇಳಿದರು.

ದುಬಾಯಿನಲ್ಲಿ ಮಾಧ್ಯಮದವರೊಂದಿಗೆ ಈ ಬಗ್ಗೆ ತೀವ್ರವಾಗಿ ಪ್ರತಿಕ್ರ್ರಿಯಿಸಿದ ಅವರು ಹೊಸ ಸರಕಾರ ಬಂದು ಹತ್ತು ತಿಂಗಳು ಆದರೂ ಇದುವರೆಗೆ ರಾಜ್ಯದ ಎನ್‌ಆರ್‌ಐ ನಿಗಮದ ಉಪಾಧ್ಯಕ್ಷರನ್ನು ಕೂಡ ನೇಮಕ ಮಾಡದೆ ಅನಿವಾಸಿಗರನ್ನು ಕಡೆಗಣಿಸಿರೋದು ನಿಜಕೂ ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಕ್ಷಿಣ ಭಾರತದ ಇನಿತರ ರಾಜ್ಯಗಳು ಎಲ್ಲಾ ಸಹಾಯ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ. ಮಂಗಳೂರಿಗೆ ಸೇವೆ ನೀಡುತಿದ್ದ ಖಾಸಾಕಿ ವಿಮಾನಯಾನ ಸೇವೆ ಈಗಾಗಲೇ ಸೇವೆ ನಿಲ್ಲಿಸುವುದರ ಮೂಲಕ ಅಲ್ಲಿಗೆ ಪಯಣಿಸುವ ಅನಿವಾಸಿಗರನ್ನು ಏರ್ ಇಂಡಿಯಾ ಟಿಕೆಟ್ ದರದಲ್ಲೂ ಕೊಳ್ಳೆ ಹೊಡಿಯುತಿದೆ ಈ ಬಗ್ಗೆ ಯಾವ ಸಂಸದರು ತುಟಿ ಬಿಚ್ಚುತ್ತಿಲ್ಲ. ಇಂತಹ ಮಲತಾಯಿ ಧೋರಣೆ ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟಕ್ಕೆ ಅನಿವಾಸಿಗರು ಮುಂದಾಗ ಬೇಕಾಗುವ ದಿನಗಳು ದೂರವಿಲ್ಲ. ತಾಯಿನಾಡಿಗೆ ಹಿಂತಿರುಗಿ ಬಂದು ತಮ್ಮ ಜೀವನ ಮುಂದುವರಿಸಲು ದಾರಿ ಕಾಣದೆ ಒಬ್ಬನಾದರೂ ಏನಾದರೂ ಹೆಚ್ಚುಕಡಿಮೆ ಮಾಡಿಕೊಂಡಲ್ಲಿ ರಾಜ್ಯಸರಕಾರವೇ ನೇರಹೊಣೆ ಹೊರ ಬೇಕಾದಿತು ಎಂದು ಅಂಬಲತೆರೆ ಸರ್ಕಾರಕೆ ಎಚ್ಚರಿಕೆ ನೀಡಿದರು . ಇನ್ನಾದರೂ ಆಡಳಿತ ಸರಕಾರ ತಿಳಿದು ಕೊಂಡರೆ ಒಳಿತು. ಅನಿವಾಸಿಗರ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಕ್ಕೂ ಒಂದೇ ನೆಲವು ಎಂಬುದು ಈವರೆಗೆ ಅನಿವಾಸಿಗರಾದ ನಮ್ಮ ಅನುಭವ. ಈ ಅನ್ಯಾಯದ ವಿರುದ್ಧ ಗಲ್ಫ್ ರಾಷ್ಟ್ರಗಳಲ್ಲಿರುವ ಎಲ್ಲಾ ಕನ್ನಡಪರ ಅನಿವಾಸಿ ಸಂಘಟನೆಗಳು ಪ್ರತಿಕ್ರಯಿಸಬೇಕು ಎಂದು ಪ್ರಭಾಕರ್ ಅಂಬಲತೆರೆ ವಿನಂತಿದ್ದಾರೆ.

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಕಡ್ಡಾಯಗೊಳಿಸಿ : ಸಂಸದ ಕ್ಯಾ. ಚೌಟ ಆಗ್ರಹ

ನವದೆಹಲಿ: ಮಂಗಳೂರಿನ ವೆನ್ಲಾಕ್ ಸೇರಿ ದೇಶದೆಲ್ಲೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎದುರಾಗಿರುವ ನರ್ಸ್ ಗಳ ಕೊರತೆ ನೀಗಿಸಲು ಎಂಬಿಬಿಎಸ್ ಮಾದರಿ ನರ್ಸ್ಗಳಿಗೂ ಇಂಟರ್ನ್ ಶಿಪ್ ಕಡ್ಡಾಯಗೊಳಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕಾವಳಮೂಡೂರು : ತೆಂಗಿನ ಗಿಡ ವಿತರಣಾ ಕಾರ್ಯಕ್ರಮ

ಬಂಟ್ವಾಳ : ಕಾವಳಮೂಡೂರು ಗ್ರಾಮ ಪಂಚಾಯತಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಕೃಷಿ ವಿಜ್ಞಾನ ಕೇಂದ್ರ ಎಕ್ಕೂರು ಮಂಗಳೂರು, ಸಿ. ಪಿ. ಸಿ. ಆರ್. ಐ. ಕಾಸರಗೋಡು, ಡೇ- ಎನ್ ಆರ್...