ಬಂಟ್ವಾಳ: ಅಜ್ಮೀರ ಪ್ರವಾಸಕ್ಕೆ ತೆರಳಿ ಅಲ್ಲಿಂದ ಬಳಿಕ ದೆಹಲಿಗೆ ತೆರಳಿ ವಾಪಾಸು ಆದ ಬಂಟ್ವಾಳ ತಾಲೂಕಿನ 9 ಜನರನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ನಿಗಾದಲ್ಲಿ ಇಡಲಾಗಿದೆ.
ಬಂಟ್ವಾಳ ತಾಲೂಕಿನ ಕೊಳಕೆ ನಿವಾಸಿಗಳು ಕಳೆದ ವಾರ ಅಜ್ಮೀರ ಪ್ರವಾಸಕ್ಕೆ ಹೋಗಿ ವಾಪಾಸು ಆಗಿದ್ದಾರೆ.
ಬಳಿಕ ಅಲ್ಲಿಂದ ದೆಹಲಿಗೆ ಹೋಗಿ ವಾಪಾಸು ಅಗಿದ್ದರು. ಹಾಗಾಗಿ ಹೆಚ್ಚಿನ ನಿಗಾ ವಹಿಸುವ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ.
ಅವರು ಅಜ್ಮೀರ ಬಳಿಕ ದೆಹಲಿಯಿಂದ ಬಳಿಕ ನಿಜಾಮುದ್ದೀನ್ ರೈಲ್ವೆ ಸ್ಟೇಷನ್ ಹೋಗಿದ್ದರು ಎಂಬ ಮಾಹಿತಿ ಇತ್ತು.
ಅವರು ನಿಜಾಮ್ಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿರಲಿಲ್ಲ .
ಬಳಿಕ 17 ತಾರೀಖಿನಂದು ಊರಿಗೆ ಮರಳಿದ್ದರು.
ಊರಿಗೆ ಮರಳಿ ಬಳಿಕ ಇಂದಿಗೆ 14 ದಿನಗಳು ಮುಗಿದಿದೆ. ಊರಿಗೆ ಮರಳಿದ ಬಳಿಕ ಹೋಂ ಕ್ವಾರಂಟೈನ್ ನಲ್ಲಿ ಇರಲಿಲ್ಲ ಹಾಗಾಗಿ ಹೆಚ್ಚಿನ ಮುಂಜಾಗ್ರತಾ ಕ್ರಮವಾಗಿ ಮತ್ತು ಇವರೆಲ್ಲರನ್ನು ಪರೀಕ್ಷೆಗೆ ಒಳಪಡಿಸುವ ಉದ್ದೇಶದಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.














