Thursday, June 26, 2025

ಕುಲಾಲ ಕುಂಬಾರ ವೇದಿಕೆ ಪಣೋಲಿಬೈಲ್ ಇದರ ನೂತನ ಅಧ್ಯಕರಾಗಿ ರಮೇಶ್ ಎಂ ಪಣೋಲಿಬೈಲ್ ಆಯ್ಕೆ

ಬಂಟ್ವಾಳ : ಕುಲಾಲ ಕುಂಬಾರರ ವೇದಿಕೆ, ಪಣೋಲಿಬೈಲು ಇದರ ನಾಲ್ಕನೇ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾದಿಕಾರಿಗಳ ಪದಗ್ರಹಣ ಸಮಾರಂಭವು ಜ. 10ರಂದು  ಸಂಜೆ 6.30ಕ್ಕೆ ಶ್ರೀ ಕೄಷ್ಣ ಭಜನಾ ಮಂದಿರ ಪಣೋಲಿಬೈಲು ಸಭಾಂಣದಲ್ಲಿ ವೇದಿಕೆಯ ಅಧ್ಯಕ್ಷರಾದ  ರವಿಂದ್ರ ಕುಲಾಲ್ ಕಂದೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅಥಿತಿಯಾಗಿ ಕೊರಗಪ್ಪ ಕುಲಾಲ ಜಾಡಕೋಡಿ ಗೌರವ ಅಧ್ಯಕ್ಷರಾದ  ರಮೇಶ್ ಕುಲಾಲ್ ಗೌರವ ಸಲಹೆಗಾರ  ಲಿಂಗಪ್ಪ ಬಂಗೇರ ಕಾರಜೆ ಉಪಾಧ್ಯಕ್ಷ  ರಮೇಶ್ ಎಂ ಪಣೋಲಿಬೈಲು ಭಾಗವಹಿಸಿದ್ದರು.  ಶಿವರಾಮ ಮರ್ತಾಜೆ ಸ್ವಾಗತಿಸಿದರು. ಶ್ಲಂ ಧರ್ ಮೂಲ್ಯ ಲೆಕ್ಕಪತ್ರ ಮಂಡನೆ ಮಾಡಿದರು. ಶ್ರೀ ಶಿವರಾಮ್ ವರದಿ ಮಂಡಿಸಿದರು. ನೂತನ ಅಧ್ಯಕ್ಷ ರಾಗಿ ರಮೇಶ್ ಎಂ ಪಣೋಲಿಬೈಲು ಉಪಾಧ್ಯಕ್ಷ ರಾಗಿ ಉಮೇಶ್ ಕುಲಾಲ್ ಪಣೋಲಿಬೈಲು ಕಾರ್ಯದರ್ಶಿ ಯಾಗಿ ಶ್ರೀ ರವಿರಾಜ್ ಕುಲಾಲ್ ಜತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ಕೊಳಕೆ ಲೆಕ್ಕಪರಿಶೋಧಕರ ರಾಗಿ ನವೀನ್ ಕುಮಾರ್ ಪಣೋಲಿಬೈಲು ಕೋಶಾಧಿಕಾರಿಯಾಗಿ ಬಾಲಕೃಷ್ಣ ಜಾಡಕೋಡಿ ಆಯ್ಕೆ ಯಾಗಿದ್ದರೆ. ರವಿರಾಜ್ ಕುಲಾಲ್ ವಂದಿಸಿದರು ಜಲಂಧರ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

More from the blog

Netravathi River : ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆ – ಎಚ್ಚರಿಕೆ ವಹಿಸಲು ಸೂಚನೆ..

ಬಂಟ್ವಾಳ: ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಆಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 6.7 ರಲ್ಲಿ ಹರಿಯುತ್ತಿದ್ದ ನದಿ ನೀರು ಸುಮರು 8.30 ಗಂಟೆಗೆ 7.5 ಕ್ಕೆ ಏರಿಕೆಯಾಗಿದೆ. ಅಪಾಯದ...

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...