Friday, January 30, 2026

ಹೊಸ ಮಾರ್ಗಸೂಚಿಯಂತೆ ಕಾರ್ಯಚರಣೆಗಿಳಿದ ಪೋಲೀಸರು

ಮೆಡಿಕಲ್ ಗೆ ಬರುತ್ತೀರಾ ಯಾಕೆ ಇಬ್ಬರು ಬರುತ್ತೀರಿ, ಅವಶ್ಯ ಸಾಮಾಗ್ರಿನಾ ಹಾಗಾದರೆ ಯಾಕೆ ಮೂವರು ಬರುತ್ತೀರಾ? ಇನ್ನು ಮುಂದೆ ಲಾಕ್ ಡೌನ್ ಅವಧಿಯಲ್ಲಿ ಈ ರೀತಿಯಲ್ಲಿ ಬಂದರೆ ವಾಹನ ಠಾಣೆಯಲ್ಲಿರುತ್ತೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದು ಮಂಗಳೂರು ಎಡಿಶನಲ್ ಎಸ್.ಪಿ.ಡಾ. ವಿಕ್ರಂ ಅಮ್ಟೆ. 

ಬಂಟ್ವಾಳ: ಮಂಗಳೂರು ಎಡಿಶನಲ್  ಎಸ್.ಪಿ. ಡಾ. ವಿಕ್ರಮ್ ಅಮ್ಟೆ ಅವರಿಂದ ಬಿಸಿರೋಡಿನಲ್ಲಿ ಕೆಲಹೊತ್ತು ವಾಹನಗಳ ಪರಿಶೀಲನೆ ಕಾರ್ಯ ನಡೆಯಿತು. ಲಾಕ್ ಡೌನ್ ಅವಧಿಯಲ್ಲಿ ಅನಾವಶ್ಯಕ ತಿರುಗಾಟ ಬೇಡ ಎಂದು ವಾಹನ ಸವಾರರಿಗೆ ಕಿವಿ ಮಾತು ಹೇಳಿದರು.

ಕೋವಿಡ್ -19ರ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಮತ್ತೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ 12 ಗಂಟೆ ಅವಧಿಯಲ್ಲಿ ಕೇವಲ ಸುತ್ತಾಟಕ್ಕೆ ಬರುವವರಷ್ಟೇ ಅಲ್ಲ, ಸ್ವಂತ ವಾಹನಗಳಲ್ಲಿ ಔಷಧ ವಸ್ತು ಖರೀದಿ, ಬ್ಯಾಂಕುಗಳಿಗೆ ಬರುವವರೂ ನಿಯಮ ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಬಿ.ಸಿ.ರೋಡ್ ಫ್ಲೈಓವರ್ ಅಡಿಯಲ್ಲಿ ನಿಂತಿದ್ದ ಪೊಲೀಸರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ತುರ್ತು ವಿಷಯಗಳಾದ ಮೆಡಿಕಲ್, ವೆಟರ್ನರಿ ಕೇರ್, ಅಗತ್ಯ ವಸ್ತುಗಳ ಖರೀದಿ ಇದ್ದರೆ, ಖಾಸಗಿ ವಾಹನಗಳಲ್ಲಿ ಹಿಂದಿನ ಸೀಟಿನಲ್ಲಿ ಒಬ್ಬರಷ್ಟೇ ಕುಳಿತುಕೊಳ್ಳಲು ಅವಕಾಶವಿದೆ. ದ್ವಿ ಚಕ್ರ ವಾಹನವಾದರೆ ಸವಾರನಿಗಷ್ಟೇ ಅವಕಾಶ ಎಂದು ಭಾರತ ಸರಕಾರದ ಗೃಹ ಸಚಿವಾಲಯ ಏ.15ರಂದು ಹೊರಡಿಸಿದ ಆದೇಶದಲ್ಲಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸೂಚನೆಗಳ ಅರಿವಿಲ್ಲದವರು, ಬ್ಯಾಂಕು ಮತ್ತಿತರ ಕಡೆಗಳಿಗೆ ಬಂದವರೂ ಪೊಲೀಸರ ತಡೆಗೆ ಒಳಪಟ್ಟರು. ಬಳಿಕ ಎಡಿಶನಲ್ ಎಸ್ಪಿ ವಿಕ್ರಮ್ ಆಮ್ಟೆ ಸ್ಥಳಕ್ಕಾಗಮಿಸಿ ಸಮಸ್ಯೆಯನ್ನರಿತು ಕೆಲವರಿಗೆ ಸೂಚನೆ ನೀಡಿ ಕಳುಹಿಸಿದರು.

ಕಾರ್ಯಾಚರಣೆಯಲ್ಲಿ ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ, ಎಸ್.ಐ.ಅವಿನಾಶ್, ಅಪರಾಧ ವಿಭಾಗ ಎಸ್.ಐ. ಸಂತೋಷ್, ಪ್ರೋ.ಎಸ್.ಐ. ಮಲ್ಲಿಕಾರ್ಜುನ ಕೊರಾಣಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಬುಧವಾರ ಬಂಟ್ವಾಳ ಪೊಲೀಸರು ವಶಪಡಿಸಿಕೊಂಡ ವಾಹನಗಳಿಂದ ಸರಕಾರದ ಖಜಾನೆ ಭರ್ತಿ ಮಾಡಿದರೆ, ಖರೀದಿಗೆಂದು ಅಂಗಡಿ, ಮುಂಗಟ್ಟು ಅಲೆಯುತ್ತಿದ್ದವರು ಪರದಾಟವನ್ನೂ ಅನುಭವಿಸಬೇಕಾಯಿತು.

More from the blog

ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ

ಬಂಟ್ವಾಳ : ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.5 ಗುರುವಾರ ರಾತ್ರಿ ಭಂಡಾರಯೇರಿ, ಮರುದಿನ ಫೆ.6 ಶುಕ್ರವಾರ ಬೆಳಿಗ್ಗೆ ಗಂಟೆ 10ರಿಂದ ಜರುಗಲಿದೆ. ಆ ಪ್ರಯುಕ್ತ ಗೊನೆಮುಹೂರ್ತವು ಗ್ರಾಮದ...

ಕರಾವಳಿ ಜಿಲ್ಲೆಗಳ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದು ಸಾಬೀತಾಗಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ಸಹ, ವಿಮಾ ಕಂಪನಿಗಳು ಮತ್ತು...

ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡಲು ಶಿಕ್ಷಣ ಇಲಾಖೆ ಆದೇಶ : ಷರತ್ತುಗಳೇನು?

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರಿಗೆ ಋತುಚಕ್ರ ರಜೆ ನೀಡಲು ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರಿಗೆ ಕೆಲವೊಂದು ಷರತ್ತುಗಳನ್ನು ಸಹ ವಿಧಿಸಲಾಗಿದೆ. ...

9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿಗೆ ಪ್ರಭಾಕರ ಪ್ರಭು ಮನವಿ 

ಬಂಟ್ವಾಳ : ನೆನೆಗುದಿಗೆ ಬಿದ್ದಿರುವ 9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿ ಮಾಡಲು ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್...