ಬಂಟ್ವಾಳ: ಕಾರು ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರೆ ಗಂಭೀರ ಗಾಯಗೊಂಡು ಹಿಂಬದಿ ಪ್ರಯಾಣಿಕೆ ಯುವತಿ ಯೋರ್ವಳು ಮೃತಪಟ್ಟ ಘಟನೆ ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ಬೆಂಜನಪದವು ಎಂಬಲ್ಲಿ ಇಂದು ರಾತ್ರಿ ವೇಳೆ ನಡೆದಿದೆ.
ಕಡೆಗೋಳಿ ನಿವಾಸಿ ಶ್ಯಾಮಲಾ (27) ಮೃತ ಪಟ್ಟ ಯುವತಿ ಹಾಗೂ ಸ್ನೇಹಿತೆ ಹರ್ಷಿತಾ ಗಂಭೀರ ಗಾಯಗೊಂಡು ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಸಿರೋಡಿನಿಂದ ಬೆಂಜನಪದವು ರಸ್ತೆಯ ಮೂಲಕ ಕಡೆಗೋಳಿ ಮನೆಗೆ ಹೋಗುತ್ತಿದ್ದ ವೇಳೆ ಬೆಂಜನಪದವು ಎಂಬಲ್ಲಿ ಎದುರಿನಿಂದ ಬಂದ ಶಿಪ್ಟ್ ಕಾರು ಡಿಕ್ಕಿ ಹೊಡೆದಿದೆ.
ಘಟನೆ ಯಿಂದ ದ್ವಿಚಕ್ರ ವಾಹನ ಸವಾರೆ ಹಾಗೂ ಹಿಂಬದಿ ಪ್ರಯಾಣಿಕೆ ಇಬ್ಬರು ಕೂಡಾ ಗಂಭೀರ ಗಾಯಗೊಂಡಿದ್ದ ರು.
ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಕೂಡಾ ಹಿಂಬದಿಯ ಸವಾರೆ ಶ್ಯಾಮಲಾ ಚಿಕಿತ್ಸೆ ಫಲಕಾರಿ ಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಶ್ಯಾಮಲಾ ಹಾಗೂ ಹರ್ಷಿತಾ ಇಬ್ಬರು ಕೂಡ ಕ್ಷೇತ್ರ ಸಂಪನ್ಮೂಲ ಕಚೇರಿ ಬಿಸಿರೋಡುವಿನಲ್ಲಿ ಕೆಲಸ ಮುಗಿಸಿ ವಾಪಾಸು ಮನೆಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಠಾಣಾ ಎಸ್. ಐ.ರಾಜೇಶ್, ಎ.ಎಸ್.ಐ.ಬಾಲಕೃಷ್ಣ , ಸಿಬ್ಬಂದಿ ಮನೋಹರ ಬೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

