ಬಂಟ್ವಾಳ: ಬುಲೇಟ್ ಬೈಕ್ ಮೆಲೆ ಟಿಪ್ಪರ್ ಲಾರಿ ಚಲಿಸಿದ ಪರಿಣಾಮ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದು, ಸಹ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕರೋಪಾಡಿ ಗ್ರಾಮದ ಕೇರಳ- ಕರ್ನಾಟಕ ಗಡಿಭಾಗದ ಮುಗುಳಿ ಎಂಬಲ್ಲಿ ಸಂಭವಿಸಿದೆ.





ರೌಡಿಶೀಟರ್ ಮುಗುಳಿ ನಿವಾಸಿ ಅನ್ವರ್ (28) ಮೃತಪಟ್ಟ ಸವಾರ. ಸಹ ಸವಾರ ನವಾಫ್ ಗಾಯಗೊಂಡವ.
ಕರ್ನಾಟಕದಿಂದ ಕೇರಳಕ್ಕೆ ಎಂ.ಸ್ಯಾಂಡ್ ಸಾಗಾಟ ಮಾಡುವ ಲಾರಿ ಮುಗುಳಿ ತಿರುವಿನಲ್ಲಿ ಬೈಕ್ ನ ಮೇಲೆ ಚಲಿಸಿದೆ.
ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಆಕ್ರೋಶಭರಿತರಾಗಿ ಪ್ರತಿಭಟನೆ ನಡೆಸಿದರು.
ಕೆಲ ಹೊತ್ತು ಈ ಪ್ರದೇಶದಲ್ಲಿ ಅಶಾಂತಿಯ ವಾತವಾರಣ ತಲೆದೋರಿತ್ತು.
ಕೂಡಲೇ ಸ್ಥಳಕ್ಕೆ ಬೇಟಿ ನೀಡಿದ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಹಾಗೂ ವಿಟ್ಲ ಪೊಲೀಸರು ಸ್ಥಳ ದಲ್ಲಿದ್ದ ಜನರನ್ನು ಚದುರಿಸಿದರು.
ಕೆಲಹೊತ್ತು ಸ್ಥಳದಲ್ಲಿ ಉದ್ವಿಗ್ನದ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಪೊಲೀಸ್ ನಿಯಂತ್ರಣದಲ್ಲಿದೆ.
ಪ್ರಸ್ತುತ ಕರ್ನಾಟಕದಿಂದ ಕೇರಳಕ್ಕೆ ಹೋಗುವ ಯಾವುದೇ ವಾಹನಗಳನ್ನು ಈ ಮಾರ್ಗದಲ್ಲಿ ಸಂಚಾರ ಮಾಡಲು ಪೊಲೀಸರು ಬಿಡುತ್ತಿಲ್ಲ.ಮೃತ ಅನ್ವರ್ ರೌಡಿಶೀಟರ್ ಅಗಿದ್ದು ಅನೇಕ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದ .














