ಬಂಟ್ವಾಳ: ಬಿಸಿರೋಡಿನ ಪಾಣೆಮಂಗಳೂರು ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರ್ ನಡುವೆ ಮುಖಾಮುಖಿ ಢಿಕ್ಕಿಯಾದ ಘಟನೆ ಯಲ್ಲಿ ಇಬ್ಬರು ಮಹಿಳೆಯರು ಮೃತರಾಗಿದ್ದಾರೆ.

ಪಾಣೆಮಂಗಳೂರಿನ ಹಳೆಟೋಲ್ ಗೇಟ್ ಸಮೀಪ ಮಧ್ಯಾಹ್ನ ದ ವೇಳೆ ಅಪಘಾತ ಸಂಭವಿಸಿತ್ತು.
ಪುತ್ತೂರುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಬಿಸಿರೋಡು ಕಡೆಯಿಂದ ಬರುತ್ತಿದ್ದ ಸೆಲೆರಿಯಾ ಕಾರಿಗೆ ಢಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು ಇಬ್ಬರು ಗಂಬೀರ ಗಾಯಗೊಂಡಿದ್ದಾರೆ.
ಗಂಭೀರ ಗಾಯಗೊಂಡ ಒಬ್ಬರು ಮಹಿಳೆ ಹಾಗೂ ಚಾಲಕ ನನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಮಂಗಳೂರು
ನಿವಾಸಿಗಳಾದ ರುಕ್ಮಿಣಿ ಹಾಗೂ ಸರೋಜಿನಿ
ಮೃತರಾದವರು.
ಚಾಲಕ ಉಮೇಶ್ ಹಾಗೂ ಅನುಷಾ ಅವರು ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ.
ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂ ಅಗಿದ್ದು ಒರ್ವ ಮಹಿಳೆ ಸ್ಥಳದಲ್ಲಿ ಯೇ ಮೃತಪಟ್ಟರೆ ಇನ್ನೋಬ್ಬರು ಮಹಿಳೆ ಆಸ್ಪತ್ರೆ ಗೆ ಸಾಗಿಸುವ ವೇಳೆ ದಾರಿಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಕುಟುಂಬ ಪಾಣೆಮಂಗಳೂರು ಸಮೀಪದ ಶಂಭೂರಿನಲ್ಲಿರುವ ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮ ಕ್ಕೆ ತೆರಳುವ ವೇಳೆ ಯಮದೂತನಂತೆ ಬಂದ ಕೆ.ಎಸ್.ಆರ್.ಟಿ.ಸಿ.ಬಸ್
ಇವರ ಬಲಿ ತೆಗೆದುಕೊಂಡಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಶರಣ್ ಗೌಡ, ಬಂಟ್ವಾಳ
ಟ್ರಾಫಿಕ್ ಠಾಣಾ ಎಸ್.ಐ. ಮಂಜುನಾಥ್ , ಎ.ಎಸ್.ಐ.ಕುಟ್ಟಿ, ಹೆಚ್.ಸಿ.ಮನೋಹರ್
ದಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಸಮಯ ಟ್ರಾಫಿಕ್ ಉಂಟಾಗಿತ್ತು