Tuesday, January 27, 2026

ಪ.ಜಾ.ಮತ್ತು ಪಂಗಡ 13 ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಿದ ಬಂಟ್ವಾಳ ಮೆಸ್ಕಾಂಗೆ ಶಾಸಕರಿಂದ ಅಭಿನಂದನೆ

ಬಂಟ್ವಾಳ: ಮೆಸ್ಕಾಂ ಬಂಟ್ವಾಳ ಉಪವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಶ್ರೀರಾಮ ಎಲೆಕ್ಟ್ರಕಲ್ ಸಹಕಾರದಲ್ಲಿ ಬಂಟ್ವಾಳ ತಾ.ನ ಎರಡು ಗ್ರಾಮಗಳಾದ ಮಣಿನಾಲ್ಕೂರು ಮತ್ತು ಸರಪಾಡಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಡು ಬಡತನದ 13 ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಿಕೊಡುವ ಮೂಲಕ ಸಾರ್ವತ್ರಿಕ ಪ್ರಶಂಶೆಗೊಳಗಾಗಿದ್ದಾರೆ. ಕಳೆದ ಹಲವು ಸಮಯಗಳಿಂದ ಕಾರಣಾಂತರದಿಂದ ಸರಪಾಡಿಯ ಕಂಗಿನಾಡಿ, ಮಣಿನಾಲ್ಕೂರಿನ ಕೊಟ್ಟಿಂಜ, ನೇಲ್ಯಪಲ್ಕೆ ಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೊಳಪಟ್ಟ ಈ 13 ಮನೆಗಳು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದವು. ಈ ಬಗ್ಗೆ ಸ್ಥಳೀಯ ಪ್ರಮುಖರು ಶಾಸಕ ರಾಜೇಶ್ ನಾಯಕ್ ಅವರ ಗಮನಸೆಳೆದಿದ್ದರು.ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ 13 ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸುವಂತೆ ಸೂಚಿಸಿದ್ದರು. ಇದಕ್ಕೆ ವಿಶೇಷ ಮುತುವರ್ಜಿ ವಹಿಸಿದ ಮೆಸ್ಕಾಂನ ಅಧೀಕ್ಷಕ ಮಂಜಪ್ಪ ಅವರ ಮಾರ್ಗದರ್ಶನದಂತೆ ಬಂಟ್ವಾಳ ಮೆಸ್ಕಾಂನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿದ್ಯುತ್ ಸಂಪರ್ಕಕ್ಕೆ ತಗಲುವ ವೆಚ್ಚವನ್ನು ತಲಾ 4 ರಿಂದ 5 ಸಾವಿರ ರೂ.ವನ್ನು ವಯಕ್ತಿಕ ನೆಲೆಯಲ್ಲಿ ಭರಿಸಿದಲ್ಲದೆ, ಶ್ರೀರಾಮ ಎಲೆಕ್ಟ್ರಕಲ್ ನ ಗುತ್ತಿಗೆದಾರ ದೇವದಾಸ್ ಅವರನ್ನೊಳಗೊಂಡ ತಂಡ ವಿದ್ಯುತ್ ವಯರ್ ಜೋಡಣೆ ಸಹಿತ ಎಲ್ಲಾ ಕಾರ್ಯವನ್ನು ಉಚಿತವಾಗಿ ಮಾಡಿಕೊಟ್ಟರೆ, ಮೆಸ್ಕಾಂ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಮಾಡಿತು. ಮಂಗಳವಾರ. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿ ಅವರು ಫಲಾನುಭವಿ ಇಂದಿರಾ ಅವರ ನಿವಾಸದ ವಿದ್ಯುತ್ ಸ್ವಿಚ್ ಅದಮಿದ್ದು,ಕತ್ತಲ ತುಂಬಿದ ತನಿಯಾರ್, ರಾಮ, ಬಾಬು ಮುಗೇರ, ಶೋಭಾ, ಬಾಬುಕೊರಗ, ಸೋಮು, ಜಾನಕಿ, ಚಲ್ಲಿ, ಅಕ್ಕು, ಯಶೋಧ, ನೀಲಮ್ಮ, ಇಂದಿರಾ, ಹರೀಶ್ ಕೆ, ಎಂಬವರ 13 ಮಂದಿ ಫಲಾನುಭವಿಗಳ ಮನೆಯಲ್ಲಿ ಬೆಳಕು ಹರಿಯಿತಲ್ಲದೆ ಈ ಕುಟುಂಬದ ಮುಖದಲ್ಲು ಸಂತಸ ತುಂಬಿತ್ತು. ಶಾಸಕರು,ಮೆಸ್ಕಾಂ ಅಧಿಕಾರಿಗಳು,ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರಲ್ಲು ಧನ್ಯತಾಭಾವ ಮೂಡಿತು.ಮೆಸ್ಕಾಂ ಅಧಿಕಾರಿಗಳು,ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರ ಈ ಕಾರ್ಯಕ್ಕೆ ಶಾಸಕ ರಾಜೇಶ್ ನಾಯಕ್ ಇದೇವೇಳೆ ಅಭಿನಂದನೆ ಸಲ್ಲಿಸಿದರು.

ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಪೈ, ಸಹಾಯಕ ಇಂಜಿನಿಯರ್ ಗಣೇಶ್, ಕಿರಿಯ ಇಂಜಿನಿಯರ್ ನಿತಿನ್ ಕಕ್ಕೆಪದವು ಶಾಖೆ , ಗುತ್ತಿಗೆ ದಾರ ದೇವದಾಸ್, ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ ಅರಳ,ಸುದರ್ಶನ್ ಬಜ,ರಮಾನಾಥ ರಾಯಿ,ರಾಮಕೃಷ್ಣಮಯ್ಯ,ಪುರುಷೋತ್ತಮ ಪೂಜಾರಿ,ಧನಂಜಯಶೆಟ್ಟಿ,ಚಿದಾನಂದ ರೈ ಕಕ್ಯೆ, ಅಭಿಷೇಕ್ ಪೂಜಾರಿ, ದಿನೇಶ್ ಗೌಡ,ಉಮೇಶ್ ಮೊದಲಾದವರು ಉಪಸ್ಥಿತಿರಿದ್ದರು.

More from the blog

ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಉಪಟಳ : ದಾಳಿಗೆ ನಾಯಿ, ಕಾಡುಹಂದಿ ಬಲಿ

ಬಂಟ್ವಾಳ : ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ. ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಪು ಬಣ್ಣದ...

ಕೊಡಾಜೆ : ತರ್ಬಿಯತುಲ್ ಇಸ್ಲಾಂ ಮದ್ರಸದಲ್ಲಿ ಗಣರಾಜ್ಯೋತ್ಸವ ಆಚರಣೆ

ಬಂಟ್ವಾಳ : ಕೊಡಾಜೆ ಬದ್ರಿಯಾ ಜುಮಾ ಮಸೀದಿ ಇದರ ಅಧೀನದ ತರ್ಬಿಯತುಲ್ ಇಸ್ಲಾಂ ಮದ್ರಸದ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಕಾರ್ಯದರ್ಶಿ ಎಸ್.ಎಂ.ರಫೀಕ್...

ಕಟೀಲು 7 ಮೇಳಗಳ ಜ.27ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.27ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.27ರ ಸೇವೆಯಾಟಗಳ ವಿವರ : ಆಡಳಿತ ಮಂಡಳಿ, ಶ್ರೀ ಮಹಾಗಣಪತಿ ದೇವಸ್ಥಾನ,...

ತುಂಬೆಯಲ್ಲಿ ಪ್ರಸಕ್ತ ವರ್ಷ ನಿವೃತ್ತರಾಗುವವರಿಗೆ ಅಭಿನಂದನಾ ಸಮಾರಂಭ 

ಬಂಟ್ವಾಳ : ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಬೇಕಾದ್ದು ಅಗತ್ಯ. ಅವರ ಅರ್ಪಣಾ ಮನೋಭಾವ, ಶಿಸ್ತುಬದ್ಧ ಸೇವೆ, ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಏಳಿಗೆಗಾಗಿ ವಹಿಸಿದ ಪಾತ್ರ ಮತ್ತು ಕೊಡುಗೆಗಳನ್ನು ಸದಾ ಸ್ಮರಿಸಬೇಕು. ಈ ನಿಟ್ಟಿನಲ್ಲಿ...