Friday, January 30, 2026

ಹಸಿದ ಹೊಟ್ಟೆಗಳನ್ನು ತಣಿಸುತ್ತಿರುವ ಅಭಿಷೇಕ್ ಸುವರ್ಣ ಅಜಿಲ ಮೊಗೇರ್ ಬಳಗ

ಬಂಟ್ವಾಳ: ಅಭಿಷೇಕ್ ಸುವರ್ಣ ಅಜಿಲ ಮೊಗೇರ್ ಮತ್ತು ಅವರ ಗೆಳೆಯರ ಬಳಗದಿಂದ ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬಂಟ್ವಾಳದಿಂದ ಮಂಗಳೂರು ವರೆಗೆ ಊಟ ತಿಂಡಿ ಇಲ್ಲದೆ ಇದ್ದ ಸರ್ವರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.

ಲಾಕ್ ಡೌನ್ ನಿಂದಾಗಿ ಊಟ, ನೀರಿಲ್ಲದೆ ಬೀದಿಬದಿಯಲ್ಲಿ ಕಷ್ಟಪಡುತ್ತಿರುವ ಅದೆಷ್ಟೋ ಮಂದಿ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ ಎಂಬುವುದನ್ನು ಮನಗಂಡ ಅಭಿಷೇಕ್ ಸುವರ್ಣ ಮತ್ತವರ ಗೆಳೆಯರು ಈ ಸೇವೆಯನ್ನು ಮಾಡುತ್ತಿದ್ದಾರೆ.

ಎಲ್ಲದಕ್ಕಿಂತಲೂ ದೊಡ್ಡ ಧರ್ಮ ಮಾನವೀಯ ಧರ್ಮ. ಅಲ್ಲಿ ಧರ್ಮದ ಹಂಗುಗಳಿಲ್ಲ. ಜಾತಿಯ ಮೇಲು ಕೀಳಿಲ್ಲ. ಅಲ್ಲಿ ಹಸಿದವನು ಮತ್ತು ಆಹಾರ ನೀಡುವವನು ಮಾತ್ರ. ಹೀಗಿರುವಾಗ ಅವರಿಗೆ ಊಟ ನೀಡುವುದು ನಮ್ಮ ಕರ್ತವ್ಯ.

ಈ ಸಮಯದಲ್ಲಿ ಯಾರಾದರು ಹಸಿವಿನಿಂದ ಇದ್ದರೆ ಅದು ಸರ್ಕಾರದ ಮಾತ್ರ ಹೊಣೆಯಲ್ಲ. ಮನುಷ್ಯರಾದ ನಮ್ಮದೂ ಕೂಡ ಜವಾಬ್ಧಾರಿ. ಆದ್ದರಿಂದ ಅಭಿಷೇಕ್ ಸುವರ್ಣ ಅಜಿಲ ಮೊಗೇರ್ ಮತ್ತವರ ತಂಡ ವಾರಕ್ಕೊಂದು ಸಲ ಅವರ ಕಣ್ಣು ಯಾರು ಹಸಿವೆಯಿಂದ ತತ್ತರಿಸಿತ್ತಾರೋ ಅವರಿಗೆಲ್ಲಾ ಊಟ ನೀಡುವ ಭರವಸೆ ನೀಡಿದ್ದಾರೆ.

ಅದೇ ರೀತಿ ಮಂಗಳೂರು ಕೊಟ್ಟಾರದ ಸ್ನೇಹದೀಪ್ ಎಚ್.ಐ.ವಿ. ಪೀಡಿತ ಅನಾಥ ಮಕ್ಕಳ ಆಶ್ರಮ ಮತ್ತು ಮೈಮುನಾ ಫೌಂಡೇಶನ್ ಇದರ ಮಾನಸಿಕ ಅಸ್ವಸ್ಥರ ಆಶ್ರಮಕ್ಕೂ ಊಟ ವಿತರಿಸಲಾಯಿತು.

ನಮ್ಮೂರಿಗೆ ನಾವೇ ಕಾವಲುದಾರರು. ನಮ್ಮವರು ಹಸಿವಿನಿಂದ ಬಳಲುತ್ತಿದ್ದರೆ
ಅದಕ್ಕೆ ನಾವೇ ಜವಾಬ್ದಾರರು ಎಂಬ ಉದ್ದೇಶದಿಂದ ಈ ಸೇವೆ ಮಾಡಲಾಗುತ್ತಿದೆ ಎಂದ ಅವರ ಸ್ನೇಹಿತರ‌ ತಂಡ ತಿಳಿಸಿದೆ.

More from the blog

ಜ.31ರಂದು ಲಯನ್ಸ್ ಇಂಟರ್ನ್ಯಾಷನಲ್ ಪ್ರಾಂತ್ಯ-6ರ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮ

ಬಂಟ್ವಾಳ: ಲಯನ್ಸ್ ಇಂಟರ್ನ್ಯಾಷನಲ್ ಪ್ರಾಂತ್ಯ-6ರ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮವು ಜ.31ರಂದು ಪ್ರಾಂತೀಯ ಅಧ್ಯಕ್ಷ ಉದ್ಯಮಿ ಬಾಲಕೃಷ್ಣ ಶೆಟ್ಟಿ ಪಿ. ಇವರ ಅಧ್ಯಕ್ಷತೆಯಲ್ಲಿ ಜ.31ರಂದು ಬಜಾರ್ ಆಡಿಟೋರಿಯಂ ಕಂದೂರು ಸಜಿಪಮೂಡದಲ್ಲಿ ನಡೆಯಲಿದೆ ಎಂದು ಸಮ್ಮೇಳನ...

ಕಟೀಲು 7 ಮೇಳಗಳ ಜ.30ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.30ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.30ರ ಸೇವೆಯಾಟಗಳ ವಿವರ : ವಾಸು ಶೆಟ್ಟಿ, 'ಶ್ರೀದೇವಿ ಕೃಪಾ, 7ನೇ...

ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ

ಬಂಟ್ವಾಳ : ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.5 ಗುರುವಾರ ರಾತ್ರಿ ಭಂಡಾರಯೇರಿ, ಮರುದಿನ ಫೆ.6 ಶುಕ್ರವಾರ ಬೆಳಿಗ್ಗೆ ಗಂಟೆ 10ರಿಂದ ಜರುಗಲಿದೆ. ಆ ಪ್ರಯುಕ್ತ ಗೊನೆಮುಹೂರ್ತವು ಗ್ರಾಮದ...

ಕರಾವಳಿ ಜಿಲ್ಲೆಗಳ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದು ಸಾಬೀತಾಗಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ಸಹ, ವಿಮಾ ಕಂಪನಿಗಳು ಮತ್ತು...