Wednesday, April 10, 2024

ಬಂಟ್ವಾಳ ಮಿನಿವಿಧಾನ ಸೌಧದಲ್ಲಿ ಬ್ರೋಕರ್ ಹಾವಳಿಗೆ ಕಡಿವಾಣ ಹಾಕಿ ಭ್ರಷ್ಟಾಚಾರ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ ಇರಿಸಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ

ಬಂಟ್ವಾಳ ಮಿನಿವಿಧಾನಸೌಧದಲ್ಲಿ ಬ್ರೋಕರ್ ಹಾವಳಿಗೆ ಕಡಿವಾಣ ಹಾಕಿ ಭ್ರಷ್ಟಾಚಾರ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ ಇರಿಸಿದ ಬಂಟ್ವಾಳ ತಹಶಿಲ್ದಾರ್ ರಶ್ಮಿ

ಬಂಟ್ವಾಳ: ಹೆಣ್ಣು ಅಬಲೆಯಲ್ಲ ಆಕೆ ಸಬಲೆ ಆಕೆ ಮನಸ್ಸು ಮಾಡಿದರೆ ವ್ಯವಸ್ಥೆಯಲ್ಲಿ ಪರಿವರ್ತನೆಯ ಕ್ರಾಂತಿಯನ್ನೇ ಮಾಡುವಳು ಅನ್ನುವುದಕ್ಕೆ ಉದಾಹರಣೆ ಎಂಬಂತೆ ಬಂಟ್ವಾಳ ತಹಾಶಿಲ್ದಾರ್ ರಶ್ಮಿಯವರು ಕಾರ್ಯನಿರ್ವಹಿಸುತ್ತಾರೆ.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಾ ಬ್ರೋಕರ್ ಹಾವಳಿಯಿಂದ ಭ್ರಷ್ಟಾಚಾರದ ತಾಂಡವವಾಡುತ್ತಿದ ಮಿನಿ ವಿಧಾನಸೌಧ ಹಲವಾರು ವರ್ಷಗಳಿಂದ ಪಹಣಿ ಪತ್ರಗಳ ವಿತರಣೆಯಿಂದ ಮೊದಲ್ಗೊಂಡು ಜನಸಾಮಾನ್ಯರ ಅವಶ್ಯಕ ಕೆಲಸಗಳಿಗೆ ಜನ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದರು ಮಧ್ಯವರ್ತಿಗಳು ಅಪರೇಟರ್ ಗಳನ್ನು ಬಳಸಿಕೊಂಡು ಕೆಲಸ ಮಾಡುತ್ತಿದ್ದರು ಇ ದೀಗ ತಹಶಿಲ್ದಾರರ ದಿಟ್ಟ ಕ್ರಮಗಳಿಂದ ಮಿನಿ ವಿಧಾನಸೌದದಲ್ಲಿ ಮದ್ಯವರ್ತಿಗಳ ಹಾವಳಿಗಳು ನಿಯಂತ್ರಣವಾಗಿದೆ.
ಜನಸಾಮಾನ್ಯರ ಸಮಸ್ಯೆಗಳು ನಿವಾರಣೆಯಾಗುತ್ತಿದೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿರುವ ಬಂಟ್ವಾಳ ತಹಶಿಲ್ದಾರರ ದಿಟ್ಟ ಹೆಜ್ಜೆ ಅಪಾರ ಶ್ಲಾಘನೆ ಒಳಾಗಾಗಿದೆ.

ಸರಿಯಾಯಿತು ಲಿಪ್ಟ್: ಮಿನಿ ವಿಧಾನ ಸೌಧದ ಉದ್ಘಾಟನೆ ಯಾದ ಕೆಲವೆ ಸಮಯದಲ್ಲಿ ಸಾರ್ವಜನಿಕ ರ ಉಪಯೋಕ್ಕಾಗಿ ಮಹಡಿಗಳಿಗೆ ತೆರಳಲು ಮಾಡಲಾಗಿದ್ದ ಲಿಪ್ಟ್ ಕೈ ಕೊಟ್ಟಿತ್ತು.
ಅಂಗವಿಕಲ ರ ಸಹಿತ ಹಿರಿಯ ವ್ಯಕ್ತಿಗಳು ಮೇಲಿನ ಮಹಡಿಗೆ ಹೊರಳಾಡಿಕೊಂಡು ಮೆಟ್ಟಲು ಗಳನ್ನು ಹತ್ತಿ ತೆರಳುವ ದೃಶ್ಯ ಎಲ್ಲರಿಗೂ ಬೇಸರ ತಂದಿತ್ತು.
ಈ ಬಗ್ಗೆ ದೂರುಗಳ ಮೇಲೆ ದೂರುಗಳು ಸಾರ್ವಜಿನಕರಿಂದ ಹೋದರೂ ಯಾವುದೇ ಪ್ರಯೋಜನ ಸಿಕ್ಕಿರಿಲಿಲ್ಲ. ಆದರೆ ಅದ್ಯಾವುದೋ ಭಾಗ್ಯ ಗೊತ್ತಿಲ್ಲ, ಬಂಟ್ವಾಳ ಕ್ಕೆ ಹೊಸದಾಗಿ ಬಂದ ಕೆ.ಎ.ಎಸ್.ಗ್ರೇಡ್ ತಹಶೀಲ್ದಾರ್ ರಶ್ಮಿ ಅವರು ಇಲ್ಲಿನ ಒಂದೊಂದು ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಂಡರು , ಯಶಸ್ವಿಯಾದರು.
ಸರಿಯಿಲ್ಲದ ಲಿಪ್ಟ್ ಸರಿಯಾಯಿತು. ಜನರು ಖುಷಿಯಿಂದ ಲಿಪ್ಟ್ ಮೂಲಕ ತೆರಳುವಂತಾಯಿತು.

ಅಟಲ್ ಜೀ ಜನ ಸ್ನೇಹಿ ಕೇಂದ್ರ: ಆಧಾರ್ ಕಾರ್ಡ್ ಸಹಿತ ಅನೇಕ ವಿಚಾರಗಳಿಗೆ ಮಿನಿವಿಧಾನ ಸೌಧದ ಕಚೇರಿಯಲ್ಲಿ ಸರಿಯಾದ ವ್ಯವಸ್ಥೆ ಗಳಿರಲಿಲ್ಲ. ಸಾರ್ವಜನಿಕ ರು ಮಿನಿವಿಧಾನ ಸೌಧದ ಸುತ್ತ ಕ್ಯೂ ನಿಂತು ಗಲಾಟೆ ಮಾಡುವುದು ಮಾಮೂಲಿಯಾಗಿತ್ತು, ಈ ಬಗ್ಗೆಯೂ ವಿಶೇಷ ಗಮನ ಹರಿಸಿದ ರಶ್ಮಿ ಅವರು ಪ್ರತ್ಯೇಕ ವಾಗಿ ಅಟಲ್ ಜನಸ್ನೇಹಿ ಕೇಂದ್ರ ವನ್ನು ತೆರದು ಅ ಮೂಲಕ ಸಾರ್ವಜನಿಕರ ಕೆಲಸಕ್ಕಾಗಿ ಬಿಟ್ಟುಕೊಡಲಾಗಿದೆ, ಕೆಲ ದಿನಗಳಿಂದ ಯಾವುದೇ ಗೊಂದಲ ವಿಲ್ಲದೆ ವ್ಯವಹಾರಗಳು ನಡೆಯುತ್ತಿದೆ.
ಸುಣ್ಣ ಬಣ್ಷ ಬಳಿಯಲಾಗಿದ್ದು ಸ್ವಚ್ಚತೆಗೆ ಹೆಚ್ಚು ಆಧ್ಯತೆಯನ್ನು ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಚಿವರ ಕಾರ್ಯಕ್ರಮ ವೊಂದರಲ್ಲಿ ಮಾತನಾಡುತ್ತಾ ಮಿನಿವಿಧಾನ ಸೌಧ ಕಚೇರಿ ಗೆ ಅಗಮಿಸುವ ಪ್ರತಿಯೊಬ್ಬರು ತಮ್ಮ ಮನೆಯಂತೆ ನೋಡಬೇಕು, ಅದೇ ರೀತಿಯಲ್ಲಿ ಕಚೇರಿಯ ಸ್ವಚ್ಚತೆಯನ್ನು ಕಾಪಾಡಬೇಕು ಎಂದು ಹೇಳಿದ ಮಾತು ಎಲ್ಲರನ್ನು ಮುಟ್ಟುವಂತೆ ಮಾಡಿತ್ತು.
ಬ್ರೋಕರ್ ಗಳಿಂದ ತುಂಬಿದ್ದ ಕಂದಾಯ ಇಲಾಖೆಗೆ ಮೇಜರ್ ಸರ್ಜರಿ ಯ ಅವಶ್ಯಕತೆ ಇತ್ತು. ಅ ಕೆಲಸ ಮೇಡಮ್ ಸಾಹೇಬರಿಂದ ಅಗಿದೆ, ಇನ್ನು ಅಗಬೇಕಾಗಿದೆ.
ಕಚೇರಿಯ ಅನೇಕ ಪೈಲ್ ಗಳು ಕಾಣೆಯಾಗುತ್ತಿತ್ತು, ಅದಕ್ಕಾಗಿ ಹೋರಾಟ ಗಳೇ ನಡೆದ ದಿನಗಳು ಇವೆ.
ಬ್ರೋಕರ್ ಗಳಲ್ಲಿ ಪ್ರತ್ಯೇಕ ಸೀಲ್ ಪ್ಯಾಡ್ ಗಳು ಇವೆ, ಇದೆಲ್ಲದರ ಬಗ್ಗೆ ಇನ್ನೂ ಸೂಕ್ಷ್ಮವಾಗಿ ಗಮನಿಸಿ ಜನ ಸಾಮಾನ್ಯ ರಿಗೆ ನ್ಯಾಯ ಒದಗಿಸುವ ಕೆಲಸ ಮಾಡುವ ಆಸೆಯಿಂದ ನಿಮ್ಮ ಮೇಲೆ ಭರವಸೆಯನ್ನು ಇಟ್ಟಿದ್ದಾರೆ. ಭರವಸೆ ಈಡೇರಿಸುವ
ವಿಶ್ವಾಸ ಇದೆ.‌

ಭ್ರಷ್ಟ ಮುಕ್ತ ಭಾರತಿ ವಿಶ್ವಕ್ಕವಳೇ ಸಾರಥಿ
ಭ್ರಷ್ಟಚಾರ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪ ತೊಟ್ಟ ನಿಮಗೆ ಅಭಿನಂದನೆಗಳು

More from the blog

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...