ಬಂಟ್ವಾಳ: ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಹೋದ ವ್ಯಕ್ತಿಗಳ ಸಿಸಿ ಕ್ಯಾಮಾರದಲ್ಲಿ ಗುರುತು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿದ ಘಟನೆ ನಾವೂರ ಗ್ರಾ.ಪಂ.ನಲ್ಲಿ ನಡೆದಿದೆ.

ನಾವೂರು ಗ್ರಾಮಪಂಚಾಯತ್ ವ್ಯಾಪ್ತಿಯ ಗುರಿಮಜಲು ಸೇತುವೆ ಬಳಿ ಕಸ ಕಡ್ಡಿ ಎಸೆಯುವವರ ಮೇಲೆ ದಂಡ ವಿಧಿಸಿಸುವ ಮೂಲಕ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸುಧಾಮಣಿ ಕಸ ಎಸೆಯುವವರ ಮೇಲೆ ಎಚ್ಚರಿಕೆ ಗಂಟೆ ಮೊಳಗಿಸಿದ್ದಾರೆ.

ರಸ್ತೆಯ ಬದಿಯಲ್ಲಿ ಕಸ ಎಸೆಯಬಾರದು ಎಂದು ನಾಮಫಲಕ ಹಾಕಿದ ಮೇಲೆ ಯೂ ಕಸ ಎಸೆಯುವ ಕೆಲಸ ನಿಂತಿರಲಿಲ್ಲ.
ಈ ಬಗ್ಗೆ ಪಿಡಿಒ ಹೆಚ್ಚಿನ ಮುತುವರ್ಜಿಯಿಂದ ಸಿ.ಸಿ.ಕ್ಯಾಮರಾ ಅಳವಡಿಕೆ ಮಾಡಿದ್ದರು.
ಸಿಸಿಕ್ಯಾಮಾರ ಅಳವಡಿಕೆ ಮಾಡಿದ ಬಳಿಕ ರಸ್ತೆಯ ಬದಿಯಲ್ಲಿ ಕಸ ಎಸೆಯುವ ದೃಶ್ಯ ಸೆರೆಯಾಗಿದ್ದು ಅವರ ಗುರುತು ಪತ್ತೆ ಹಚ್ಚಿ ಅವರನ್ನು ಪಿಡಿಒ ಸ್ಥಳಕ್ಕೆ ಕರೆಯಿಸಿ ಸ್ಥಳದಲ್ಲಿಯೇ ದಂಡ ವಿಧಿಸಿದರು.
ನಾವೂರ ಗ್ರಾಮದ ಮೂವರು ವ್ಯಕ್ತಿ ಗಳು ಕಸ ಎಸೆಯುವ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಮೂವರನ್ನು ಸ್ಥಳಕ್ಕೆ ಕರೆಸಿದ ಪಿಡಿಒ ಒಬ್ಬರಿಗೆ ತಲಾ ಒಂದುವರೆ ಸಾವಿರದಂತೆ ದಂಡ ವಿಧಿಸಿದ್ದಾರೆ.
ಇದೊಂದು ಎಚ್ಚರಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ಕೆಲಸ ಪುರಸಭಾ ವ್ಯಾಪ್ತಿಯಲ್ಲಿ ಯಾಕೆ ಮಾಡುತ್ತಿಲ್ಲ ಎಂಬ ಆರೋಪ ಗಳು ಕೇಳಿ ಬರುತ್ತಿದೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ರಾಷ್ಟ್ರೀಯ ಹೆದ್ದಾರಿ ಸಹಿತ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಕಸದ ರಾಶಿಗಳು ತುಂಬಿಕೊಂಡಿವೆ.
ಈ ಬಗ್ಗೆಮಾಧ್ಯಮಗಳು ಕಾಳಜಿಗೆ ಇಲಾಖೆ ಕಿಮ್ಮತ್ತಿನ ಸ್ಪಂದನೆಯೂ ನೀಡುತ್ತಿಲ್ಲ ಎಂಬ ಆರೋಪ ಗಳು ಕೇಳಿ ಬರುತ್ತಿದೆ. ಗ್ರಾಮ ಗ್ರಾಮಗಳಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದಾರೆ ಆದರೆ ಪುರಸಭೆ ಮಾತ್ರ ಇನ್ನೂ ಕೂಡಾ ತ್ಯಾಜ್ಯ ಸಮಸ್ಯೆ ಗೆ ಪರಿ ಹಾರ ಕಂಡುಕೊಂಡಿಲ್ಲ ಎಂಬುದೇ ಬೇಸರದ ಸಂಗತಿ.

