Wednesday, October 25, 2023

ಬಿಜೆಪಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಹಿನ್ನೆಲೆ : ಎ.17ರಂದು ಬೆಳ್ತಂಗಡಿ ನಗರದಲ್ಲಿ ಮಾರ್ಗ ಬದಲಾವಣೆ, ಜಿಲ್ಲಾಧಿಕಾರಿ ಆದೇಶ

Must read

ಬೆಳ್ತಂಗಡಿ: ವಿಧಾನಸಭಾ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಎ.17ರಂದು ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ನಗರದಲ್ಲಿ ಮಾರ್ಗ ಬದಲಾವಣೆಗಳನ್ನು ಮಾಡಿ ದ.ಕ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಎ.17ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಉಜಿರೆ ಕಡೆಗೆ ಹೋಗುವವರು ಗುರುವಾಯನಕೆರೆಯಲ್ಲಿ ಮಾರ್ಗ ಬದಲಾಯಿಸಿ ಗೇರುಕಟ್ಟೆ- ಪರಪ್ಪು- ಆದುರುಪೆರಾಲ್ – ಕೊಯ್ಯೂರು ಕ್ರಾಸ್ ಮೂಲಕ ಸಾಗಿ ಮಂಗಳೂರಿನತ್ತ ಸಾಗುವವರು ಕೊಯ್ಯೂರು ಕ್ರಾಸ್ – ಆದುರುಪೆರಾಲ್- ಪರಪ್ಪು- ಗೇರುಕಟ್ಟೆ ಮಾರ್ಗವಾಗಿ ಸಾಗಲು ಅನುಮತಿ ವೃತ್ತನಿರೀಕ್ಷಕರು,ತಹಶೀಲ್ದಾರ್ ಮಾಡಿರುವ ಮನವಿಗೆ ಜಿಲ್ಲಾಧಿಕಾರಿ ಸ್ಪಂಧನೆ ನೀಡಿದ್ದು ಮಂಗಳೂರಿನತ್ತ ಸಾಗುವವರು ಕೊಯ್ಯೂರು ಕ್ರಾಸ್ – ಆದುರುಪೆರಾಲ್- ಪರಪ್ಪು- ಗೇರುಕಟ್ಟೆ ಮಾರ್ಗವಾಗಿ ಸಾಗಲು ಅನುಮತಿ ನೀಡಲಾಗಿದೆ. ಉಜಿರೆ ಕಡೆಗೆ ಸಾಗುವವರು ಗುರುವಾಯನಕೆರೆಯಲ್ಲಿ ಉಪ್ಪಿನಂಗಡಿ ಮಾರ್ಗವಾಗಿ ಸಾಗಿ ಗೇರುಕಟ್ಟೆ- ಪರಪ್ಪು- ಆದುರುಪೆರಾಲ್- ಕೊಯ್ಯೂರು ಕ್ರಾಸ್ ಮೂಲಕ ಸಾಗಲು ಅನುಮತಿ ನೀಡಲಾಗಿದೆ.

ಈ ರಸ್ತೆಯಲ್ಲಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ

More articles

Latest article