Saturday, October 21, 2023

ಸ.ಪ್ರ. ದರ್ಜೆ ಕಾಲೇಜು ವಿಟ್ಲ ಕಲಾ ಪದವಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ

Must read

ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ ಇದರ 2004 ರ ಸಾಲಿನ ಕಲಾ ಪದವಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉಪನ್ಯಾಸಕರ ಘನ ಉಪಸ್ಥಿತಿ ಯೊಂದಿಗೆ ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

2004 ರ ಅವಧಿಯಲ್ಲಿ ಉಪನ್ಯಾಸಕ ರಾಧಾಕೃಷ್ಣ ನಾವೆಲ್ಲರೂ ಪರಸ್ಪರ ಸಹಕಾರದಿಂದ ಪ್ರೀತಿಯಿಂದ ಬದುಕೋಣ ಎಂದು ಶುಭಹಾರೈಸಿದರು. ವೇದಿಕೆಯಲ್ಲಿ ಉಪನ್ಯಾಸಕ ರಾಧಾಕೃಷ್ಣ ಭಟ್, ತಾರಾ ಯು ರಾವ್, ಚಕ್ರೇಶ್ವರಿ, ಡಾ.ನವೀನ್ ಕೋಣಾಜೆ, ಬಾಲಕೃಷ್ಣ ನಾಯಕ್, ದಾಮೋದರ್ ಉಪಸ್ಥಿತರಿದ್ದು, ಸಮಯೋಚಿತವಾಗಿ ಹಳೆ ವಿದ್ಯಾರ್ಥಿ ಗಳನ್ನು ಹರಸಿದರು.

ನಂತರ ಉಪನ್ಯಾಸಕರಿಗೆ ಗುರುವಂದನೆ ವಿಶೇಷ ಕಾರ್ಯಕ್ರಮ ನಡೆಸಲಾಯಿತು. ಕಾಲೇಜಿನ ಉಪನ್ಯಾಸಕಿ‌‌ ಚಕ್ರೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಮಾತೇಷ್ ಭಂಡಾರಿ ಪಾಸ್ತವಿಕ ಭಾಷಣದ ಮೂಲಕ ಸ್ವಾಗತಿಸಿ,ರವೀಶ್ ಆಚಾರ್ಯ ಧನ್ಯವಾದ ನೀಡಿ,ರಷ್ಮಿ ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು.

More articles

Latest article