ಬೆಂಗಳೂರು: ದಸರಾ ಹಬ್ಬದ ದಿನದಂದು ಮೋಹಕ ತಾರೆ ರಮ್ಯಾ ಅವರು ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ. ಹೌದು,ಕನ್ನಡ ಚಿತ್ರರಂಗಕ್ಕೆ ರಮ್ಯಾ ಅವರು ಕಮ್ಬ್ಯಾಕ್ ಮಾಡಿದ್ದಾರೆ. ನಿರ್ಮಾಪಕಿಯಾಗಿ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಅವರ ಮೊದಲ ನಿರ್ಮಾಣದ ಸಿನಿಮಾಗೆ ಈಗ ಶೀರ್ಷಿಕೆ ಅನೌನ್ಸ್ ಆಗಿದ್ದು, ಸ್ವಾತಿ ಮುತ್ತಿನ ಮಳೆ ಹನಿಯೇ ಎಂದು ಟೈಟಲ್ ಇಡಲಾಗಿದೆ. ವಿಶೇಷ ಏನೆಂದರೆ, ಈ ಸಿನಿಮಾಗೆ ರಾಜ್ ಬಿ. ಶೆಟ್ಟಿ ಅವರು ನಿರ್ದೇಶನ ಮಾಡಲಿದ್ದಾರೆ.

I can’t wait to begin work on #SwathiMutthinaMaleHaniye as a first time producer and actor once again with the genius @RajbShettyOMK @lighterbuddha @m3dhun #PraveenShriyan Happy Vijayadashami everyone! ಎಲ್ಲರಿಗೂ ಶುಭವ ತರಲಿ ವಿಜಯದಶಮಿ 🧡 Thank you for all the love! 🤗♥️ https://t.co/ccArpHsXoa
— Ramya/Divya Spandana (@divyaspandana) October 5, 2022
ತಮ್ಮದೇ ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ರಮ್ಯಾ ರೀ ಎಂಟ್ರಿ ಪಡೆಯುತ್ತಿದ್ದಾರೆ. ನಟನೆಯ ಜತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ರಮ್ಯಾ ಕಂಬ್ಯಾಕ್ ಸಿನಿಮಾಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ರಾಜ್ ಬಿ. ಶೆಟ್ಟಿ ನಟನೆಯನ್ನೂ ಮಾಡುತ್ತಿದ್ದಾರೆ.
ಇನ್ನು ರಮ್ಯಾ ತಮ್ಮ ಕಂಬ್ಯಾಕ್ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ರಮ್ಯಾ ನೀಡಿದ ಸರ್ಪೈಸ್ಗೆ ಫ್ಯಾನ್ ಖುಷಿಯಾಗಿದ್ದಾರೆ.