ಅಡುಗೆ ಸಿಲಿಂಡರ್ ಲಾರಿ ಮತ್ತು ಪಿಕಪ್ ನಡುವೆ ಮುಖಮುಖಿ ಡಿಕ್ಕಿಯಾದ ಘಟನೆ ಪುಂಜಾಲಕಟ್ಟೆ ಎಂಬಲ್ಲಿ ನಡೆದಿದ್ದು, ಪಿಕಪ್ ವಾಹನ ಚಾಲಕ ಪವಾಡ ಸದೃಶವಾಗಿ ಪಾರಾಗಿದ್ದಾನೆ.
ಪಿಕಪ್ ವಾಹನ ಚಾಲಕ ರಾಘವೇಂದ್ರ ಮದ್ದಡ್ಕ ಪ್ರಾಣಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಜಿರೆಯಿಂದ ಬಿ. ಸಿ ರೋಡ್ ಕಡ ಗೆ ಅಡುಗೆ ಗ್ಯಾಸ್ ಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಮೂರ್ಜೆ ಯಿಂದ ಪುಂಜಾಲಕಟ್ಟೆಗೆ ಬರುತಿದ್ದ ಪಿಕಪ್ ನಡುವೆ ಪುಂಜಾಲ್ ಕಟ್ಟೆ ಯ ಪ್ರಗತಿ ಹಾರ್ಡ್ವೇರ್ ನ ಎದುರು ಅಪಘಾತ ಸಂಭವಿಸಿದ್ದು, ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೇರಿಯಾಗಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪುಂಜಾಲಕಟ್ಟೆ ಎಸ್ ಐ ಸುತೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.