Wednesday, September 27, 2023

ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕ ಮೊಸಳೆ ಬಬಿಯಾ ಇನ್ನಿಲ್ಲ

Must read

ಕಾಸರಗೋಡು: ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಮೊಸಳೆ ಬಬಿಯಾ ಸಾವನ್ನಪ್ಪಿದೆ.

ಸರೋವರ ಕ್ಷೇತ್ರ ಎಂದೇ ಖ್ಯಾತಿಯಾದ ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಈ ಮೊಸಳೆಯು ಕ್ಷೇತ್ರ ಪಾಲಕನಂತಿತ್ತು. ಇದನ್ನು ದೇವರ ಮೊಸಳೆ ಎಂದೇ ಕರೆಯಲಾಗುತ್ತಿತ್ತು. ದಿನನಿತ್ಯ ದೇವರ ಪೂಜೆ ಬಳಿಕ ಬಬಿಯಾ ಮೊಸಳೆಗೆ ನೈವೇದ್ಯ ಅರ್ಪಿಸುವುದು ಇಲ್ಲಿ ಸಂಪ್ರದಾಯ. ಕೆಲವು ವರ್ಷಗಳ ಹಿಂದೆ ಈ ಮೊಸಳೆ ಕೆರೆಯಿಂದ ಹೊರ ಬಂದು ದೇವಸ್ಥಾನದ ಬಳಿ ಕಾಣಿಸಿಕೊಂಡು ನೆರೆದವರನ್ನು ಆಶ್ಚರ್ಯಗೊಳಿಸಿತ್ತು.

ಭಕ್ತರು ಕೆರೆಗೆ ಇಳಿದು ಶುಚಿರ್ಭೂತರಾಗಿ ಬರುತ್ತಿದ್ದರು. ಆದರೆ ಯಾರಿಗೂ ಯಾವುದೇ ರೀತಿಯ ತೊಂದರೆ ಉಂಟು ಮಾಡುತ್ತಿರಲಿಲ್ಲ. ದೇವಳದ ಕೆರೆಯಲ್ಲಿ ಸುದೀರ್ಘ ಅವಧಿಗೆ ವಾಸವಾಗಿದ್ದ ಬಬಿಯಾ ಇದೀಗ ಇಹಲೋಕ ತ್ಯಜಿಸಿದೆ.

More articles

Latest article