Tuesday, September 26, 2023

ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಗೆ ನೆರವಾದ ಧರ್ಮ ಮ್ರತ್ಯುಂಜಯ ತುಳುನಾಡ್ ತಂಡ

Must read

ಬಂಟ್ವಾಳ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇದೀಗ ಬಲದ ಭಾಗದಲ್ಲಿ ಬಲಹೀನಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ಧರ್ಮ ಮ್ರತ್ಯುಂಜಯ ತುಳುನಾಡ್ ತಂಡದ ಯುವಕರು ಭವತಿ ಬಿಕ್ಷಂದೇಹಿ ಅಭಿಯಾನದ ಮೂಲಕ ಸಂಗ್ರಹಿಸಿದ ಧನ ಸಹಾಯವನ್ನು ಯುವತಿ ಕುಟುಂಬಕ್ಕೆ ಹಸ್ತಾಂತರಿಸಿದರು.

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಕಡಮಾಜೆ ನಿವಾಸಿಯಾಗಿರುವ ಪ್ರಮೀಳ ಎಂಬ ಯುವತಿ ಸುಮಾರು ವರ್ಷಗಳಿಂದ ಮಾನಸಿಕಳಾಗಿದ್ದು ಇದೀಗ ಬಲದ ಭಾಗದಲ್ಲಿ ಬಲಹೀನಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತೀರ ಬಡತನದಲ್ಲಿದ್ದ ಈ ಬಡ ಕುಟುಂಬಕ್ಕೆ ಹಣ ಸಂಗ್ರಹಕೋಸ್ಕರ ಬಂಟ್ವಾಳ ದಸರಾದಲ್ಲಿ ಧರ್ಮ ಮ್ರತ್ಯುಂಜಯ ತುಳುನಾಡ್ ತಂಡದ ಯುವಕರು ಅ. 6 ರಂದು ಭವತಿ ಬಿಕ್ಷಂದೇಹಿ ಅಭಿಯಾನದ ಮೂಲಕ  ಸಂಗ್ರಹವಾದ ಒಟ್ಟು ಮೊತ್ತ 15,340 ರೂ ಗಳನ್ನು ಪ್ರಮೀಳ ಕುಟುಂಬಕ್ಕೆ ಭಜರಂಗದಳ ಬಂಟ್ಟಾಳ ಪ್ರಖ೦ಡ ಸಹಸಂಚಾಲಕ ಸಂತೋಷ ಸರಪಾಡಿ ಹಾಗೂ ಬಂಟ್ಟಾಳ ಪ್ರಖಂಡ ಸೇವಾ ಪ್ರಮುಖ ಪ್ರಸಾದ್ ಬೆಂಜನಪದವು ಹಾಗೂ ಸರಪಾಡಿ ಖಂಡ ಸಮಿತಿ ವಿಶ್ವ ಹಿಂದೂ ಪರಿಷದ್ ಕಾರ್ಯದಶಿ೯ ಪ್ರಶಾಂತ್ ಕೊಟ್ಟಾರಿ ಹಾಗೂ ಭವತಿ ಭಿಕ್ಷಾದೇಹಿ ಸಿಂತಾನಿಕಟ್ಟೆ ಪೂಪಾಡಿಕಟ್ಟೆ ತಂಡದ ಕಾರ್ಯಕರ್ತರು ಹಾಗೂ ಧರ್ಮ ಮೃತ್ಯುಂಜಯ ತುಳುನಾಡ್ ತಂಡದ ಸಕ್ರೀಯ ಕಾರ್ಯಕತ೯ರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.

More articles

Latest article