ಬಂಟ್ವಾಳ: ಕಾರು ಚಾಲಕನ ನಿರ್ಲಕ್ಷ್ಯ ತನ ಚಾಲನೆಯಿಂದ ರಸ್ತೆ ಬದಿ ನಿಲ್ಲಿಸಲಾಗಿದ್ದ ಎರಡು ಕಾರುಗಳ ಸಹಿತ ಡಿಕ್ಕಿಯಾದ ಕಾರು ಜಖಂಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಪರಂಗಿಪೇಟೆ ಎಂಬಲ್ಲಿ ಇಂದು ನಡೆದಿದೆ.

ಆಸೀಫ್ ಮಹಮ್ಮದ್ ಎಂಬಾತನ ನಿರ್ಲಕ್ಷತನದ ಕಾರು ಚಾಲನೆಯಿಂದ ಈ ಘಟನೆ ನಡೆದಿದ್ದು, ಚಾಲಕ ಆಸೀಫ್ ಯಾವುದೇ ಗಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾನೆ.
ಬಂಟ್ವಾಳ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಫರಂಗಿಪೇಟೆ ಎಂಬಲ್ಲಿ ಈ ಘಟನೆ ನಡೆದಿದೆ.
ಫರಂಗಿಪೇಟೆ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ.
ಘಟನೆಯಿಂದ ಮೂರು ಕಾರುಗಳು ಜಖಂಗೊಂಡಿದೆ.
ಮೆಲ್ಕಾರ್ ಟ್ರಾಫಿಕ್ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.