ಕುಕ್ಕಿಪಾಡಿ ಗ್ರಾಮ ಪಂಚಾಯತ್ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯ ಅಮ್ರತ ಮಹೋತ್ಸವದ ಪ್ರಯುಕ್ತ ಅಮ್ರತ ಸರೋವರ ಯೋಜನೆಯಲ್ಲಿ ಎಲಿಯನಡುಗೋಡು ಗ್ರಾಮದ ಬದ್ಯಾರು ಕೆರೆ ಅಭಿವೃದ್ದಿಗೆ ಆಯ್ಕೆಯಾಗಿದ್ದು, ಕೆರೆ ದಡದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣವ ನ್ನು ನಿವೃತ್ತ ಸೈನಿಕರಾದ ದಯಾನಂದ ಶೆಟ್ಟಿ ನೆರವೇರಿಸಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ರಾದ ಸುಜಾತ ಆರ್ ಪೂಜಾರಿ ವಹಿಸಿದ್ದು ಮುಖ್ಯ ಅತಿಥಿ ಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ತುಂಗಪ್ಷ ಬಂಗೇರ, ಪಂಚಾಯತ್ ಮಾಜಿ ಅಧ್ಯಕ್ಷ ರಾದ ಮಹಾಬಲ ಶೆಟ್ಟಿ ಹಾಗೂ ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ರಾದ ಯೋಗೀಶ ಆಚಾರ್ಯ, ಅಭಿವೃದ್ಧಿ ಅಧಿಕಾರಿ ತುಳಸಿನಿ ಇವರುಗಳು ಉಪಸ್ತಿತರಿದ್ದರು ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ, ಸುಭಾಷ್ ಪರಾಡ್ಕರ್ ಕಾನ,ಕುಮಾರಿ ಸ್ವಾತಿ, ಸ್ಟೇನಿ ಡಿ.ಸೋಜ, ಮನೀಷ್ ಶೆಟ್ಟಿ,ಅನುಷ್ ಶೆಟ್ಟಿ ದೇವಸ ಇವರುಗಳನ್ನು ಅಭಿನಂದಿಸಲಾಯಿತು ಪಂಚಾಯಿತ್ ಸದಸ್ಯರುಗಳು, ಪಂಚಾಯತ್ ಸಿಬ್ಬಂದಿಗಳು ಉಪಸ್ತಿತರಿದ್ದರು
ಭವ್ಯ ಸ್ವಾಗತಿಸಿ,ಪ್ರೀಯಾ ಕಾರ್ಯಕ್ರಮ ನಿರೂಪಿಸಿದರು ಪೂರ್ಣಿಮ ಧನ್ಯವಾದವಿತ್ತರು.