ಕಳ್ಳಿಗೆ ಗ್ರಾಮಾಭಿರುದ್ಧಿ ಸಂಘ ಜೆಸಿಐ ಬಂಟ್ವಾಳ ಇದರ ಸಹಭಾಗತ್ವದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಧ್ವಜಾರೋಹಣ ಪಂಬದಬೆಟ್ಟು ಮೈದಾನದಲ್ಲಿ ನಡೆಯಿತು ಈ ಅಮೃತ ಮಹೋತ್ಸವದಲ್ಲಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಬಿ. ರಾಜಶೇಖರ ರೈ ಕಳ್ಳಿಗೆ, ಚಂದ್ರಪ್ರಕಾಶ್ ಶೆಟ್ಟಿ, ದಿವಾಕರ ಪಂಬದಬೆಟ್ಟು, ಮಧುಸೂದನ್ ಶಣೈ, ರೋಷನ್ ಕಳ್ಳಿಗೆ, ಶಿವಪ್ರಸಾದ್ ಕನಪಾಡಿ, ಡಿಕೇಶ್ (ಸೈನಿಕರು),ಜೆ. ಸಿ ಸಂತೋಷ್ ಜೈನ್, ರವಿರಾಜ್ ಜೈನ್, ರತ್ನವತಿ,ಮನೋಜ್ ಕನಪಾಡಿ, ಧನಂಜಯ ಪಂಬದಬೆಟ್ಟು, ರೋನಾಲ್ಡ್ ಮೊಂತೆರೊ ಮೊದಲಾದವರು ಉಪಸ್ಥಿತರಿದ್ದರು.