ವಿಟ್ಲ: ಕುಕ್ಕಾಜೆ ಶ್ರೀಕಾಳಿಕಾಂಬ ಆಂಜನೇಯ ದೇವಸ್ಥಾನ ಕುಕ್ಕಾಜೆ ಮಾಣಿಲ ಸದ್ರಿ ಕ್ಷೇತ್ರದ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಶುಕ್ರವಾರ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಬೆಳಿಗ್ಗೆ ಗಣಪತಿ ಹೋಮ ದೊಂದಿಗೆ ಮುಹೂರ್ತದ ಕಲ್ಲು ಇಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಮುಖ್ಯಸ್ಥರು ಎಂ,ಕೆ ಕುಕ್ಕಾಜೆ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಾಳೆಕಲ್ಲು, ಕೋಶಾಧಿಕಾರಿ ಕೃಷ್ಣಪ್ಪ ತಾರಿದಳ , ರಾಮಣ್ಣ ಪೂಜಾರಿ ಕುಕ್ಕಾಜೆ, ಕೃಷ್ಣಪ್ಪ ಪೂಜಾರಿ ಕುಕ್ಕಾಜೆ, ಕಪ್ಪುಕಲ್ಲಿನ ಶಿಲ್ಪಿ ಉದಯ ಪೂಜಾರಿ ಅನಂತಾಡಿ, ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಮೋಹಿನಿ ತಾರಿದಳ , ಮತ್ತಿತರರು ಉಪಸ್ಥಿತರಿದ್ದರು.