ವಿಟ್ಲ: ಲಾರಿ ದ್ವಿಚಕ್ರ ವಾಹನಕ್ಕೆ ಗುದ್ದಿದ ವಿಚಾರದಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ ಕೇಪು ಗ್ರಾಮದಲ್ಲಿ ನಡೆದಿದೆ.
ರಕ್ಷಿತ್ ಹಾಗೂ ಗಿರೀಶ್ ಗಂಭೀರ ಗಾಯಾಗೊಂಡಿದ್ದಾರೆ. ಲಾರಿಯೊಂದು ಕೇಪು ನಿವಾಸಿ ಗಣೇಶ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ, ಸವಾರನ ಕೈಗೆ ಏಟಾಗಿದೆ. ಇದರಿಂದ ಸ್ಥಳದಲ್ಲಿದ್ದ ರಕ್ಷಿತ್, ಗಿರೀಶ್, ಕಿರಣ್ ಮತ್ತಿತರರು ಸೇರಿಕೊಂಡು ಲಾರಿಯವನಲ್ಲಿ ಮಾತುಕತೆ ಮಾಡಿದ್ದಾರೆ. ಈ ವಿಚಾರವನ್ನು ಲಾರಿ ಚಾಲಕ ದರ್ಬೆಯಲ್ಲಿರುವ ಸಂಬಂಧಿಕರಿಗೆ ಹೇಳಿದ್ದಾನೆ. ಝುಬೈದ್, ಅಶ್ರಫ್, ಸಾಧಿಕ್ ಮತ್ತಿತರರು ಕಾರಿನಲ್ಲಿ ಆಗಮಿಸಿದ್ದಾರೆ. ಸ್ಥಳದಲ್ಲಿ ಜೋರು ಮಾತುಕತೆಗಳು ಆಗಿದ್ದು, ಸ್ಥಳೀಯರು ಬಿಡಿಸಿ ಕಳುಹಿಸಿದ್ದಾರೆ. ಕಾರು ಹೋಗಿದ್ದು, ರಕ್ಷಿತ್ ಮತ್ತೆ ಹೋಗಿ ಕಾರನ್ನು ಅಡ್ಡ ಹಾಕಿದ್ದು, ಗಿರೀಶ ಸಹ ರಿಕ್ಷಾದಲ್ಲಿ ಸ್ಥಳಕ್ಕೆ ತೆರಳಿದ್ದು ಅಲ್ಲಿ ಗಲಾಟೆಯಾಗಿ ಅವರ ಮೇಲೆ ಹಲ್ಲೆ ನಡೆದಿದೆ. ಎರಡು ಪಂಗಡದವರ ಮೇಲೆ ವಿಟ್ಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.