ಬಂಟ್ವಾಳ: ಎ.9 ಶನಿವಾರ ರಾತ್ರಿ ವೇಳೆ ಸುರಿದ ಬಾರಿ ಗಾಳಿ ಮಳೆಗೆ ಬಿಸಿರೋಡಿನ ಪಿ.ಎಲ್.ಡಿ.ಬ್ಯಾಂಕ್ ಮುಂಭಾಗದ ರಸ್ತೆ ತುಂಬಾ ಮಳೆ ನೀರು ತುಂಬಿತ್ತು.
ಧಾರಾಕಾರವಾಗಿ ಸುರಿದ ಮಳೆಗೆ ನೀರು ಹರಿದು ಹೋಗಲು ಅವಕಾಶ ಇಲ್ಲದೆ ಬಿಸಿರೋಡಿನ ಕೈಕುಂಜೆ ಕಾಂಕ್ರೀಟ್ ರಸ್ತೆ ತುಂಬಾ ಕೃತಕ ನೆರೆ.
ಇತ್ತೀಚಿಗೆ ಈ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ನಡೆದಿದ್ದು, ರಸ್ತೆಯ ಬದಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ನಿರ್ಮಿಸಲಾಗಿದೆ. ಆದರೆ ಪ್ರಥಮ ಮಳೆಗೆ ನೀರು ಹರಿದು ಚರಂಡಿಗೆ ಹೋಗದೆ ಕಾಂಕ್ರೀಟ್ ರಸ್ತೆಯಲ್ಲಿ ತುಂಬಿತ್ತು ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡುವ ಸಮಯದಲ್ಲಿ ಮಳೆ ನೀರು ಹರಿದು ಹೋಗಲು ಸಣ್ಣ ಸಣ್ಣ ರಂಧ್ರ ಗಳನ್ನು ಮಾಡಲಾಗಿತ್ತು. ಆದರೆ ರಂದ್ರಗಳು ಕಸ , ಎಲೆ ಹಾಗೂ ಮಣ್ಣು ತುಂಬಿ ಬ್ಲಾಕ್ ಆಗಿದೆ ,
ಈ ಕಾರಣದಿಂದ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ನೀರು ತುಂಬಿ ವಾಹನ ಸವಾರರಿಗೆ ಕಿರಿಕಿರಿ ಯಾಗಿ ದೆ.